ದೆಹಲಿ ತಂಡದಲ್ಲೂ ಮೂಲೆಗುಂಪಾದ ಗೌತಮ್ ಗಂಭೀರ್!

ಶುಕ್ರವಾರ, 10 ಫೆಬ್ರವರಿ 2017 (11:20 IST)
ನವದೆಹಲಿ: ಫಾರ್ಮ್ ಕಳೆದುಕೊಂಡಿರುವ ಗೌತಮ್ ಗಂಭೀರ್ ಗೆ ಈಗ ಟೀಂ ಇಂಡಿಯಾದಲ್ಲಂತೂ ಸ್ಥಾನವಿಲ್ಲ. ಇದೀಗ ದೆಹಲಿ ತಂಡದಲ್ಲೂ ಕೇಳೋರಿಲ್ಲದಂತಾಗಿದೆ. ಅವರ ಸ್ಥಾನಕ್ಕೆ ಯುವ ಆಟಗಾರ ರಿಷಬ್ ಪಂತ್ ಬಂದಿದ್ದಾರೆ.

 
ಫೆಬ್ರವರಿ 25 ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ದೆಹಲಿ ತಂಡಕ್ಕೆ ರಿಷಬ್ ಪಂತ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಪಂತ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆಗಾರರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಗಂಭೀರ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಸದ್ಯಕ್ಕೆ ಯುವ ಬ್ಯಾಟ್ಸ್ ಮನ್ ರಿಷಬ್ ಬಗ್ಗೆ ಟೀಂ ಇಂಡಿಯಾದಲ್ಲೂ ಭಾರೀ ನಿರೀಕ್ಷೆಯಿದೆ. ಇನ್ನೂ ಟೀಂ ಇಂಡಿಯಾದಲ್ಲಿ ತಳ ಊರುತ್ತಿರುವ ರಿಷಬ್ ಗೆ ಈಗ ಶಿಖರ್ ಧವನ್,  ಗಂಭೀರ್,  ಆಶಿಷ್ ನೆಹ್ರಾ ಮತ್ತು ಇಶಾಂತ್ ಶರ್ಮಾರಂತಹ ಘಟಾನುಘಟಿಗಳನ್ನು ಮುನ್ನಡೆಸುವ ಅವಕಾಶ ಒದಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ