ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸುವ ಅಭಿಮಾನಿಗಳನ್ನು ಬೆಂಬಲಿಸುವ ಗೌತಮ್ ಗಂಭೀರ್

ಮಂಗಳವಾರ, 10 ಜನವರಿ 2017 (09:36 IST)
ನವದೆಹಲಿ: ಕ್ರಿಕೆಟ್ ಮೈದಾನದಲ್ಲಾದರೂ ಅಷ್ಟೇ. ಗೌತಮ್ ಗಂಭೀರ್ ತಮ್ಮನ್ನು ಕೆಣಕಲು ಬಂದವರನ್ನು ಸುಮ್ಮನೇ ಬಿಡುವ ಜಾಯಮಾನದವರಲ್ಲ. ಇದೀಗ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸಲೂ ಅವರು ಹಿಂದೆ ಮುಂದೆ ನೋಡುತ್ತಿಲ್ಲ.

ದೆಹಲಿ ಜನತೆಯನ್ನು ಅಲಕ್ಷಿಸಿ ಪಂಜಾಬ್ ಚುನಾವಣೆಯತ್ತ ದೃಷ್ಟಿ ಹರಿಸಿರುವ ಕೇಜ್ರಿವಾಲ್ ದೆಹಲಿ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದಾರೆ.ಇದು ಅನೇಕ ಅಭಿಮಾನಿಗಳನ್ನು ಕೆರಳಿಸಿದೆ. ಹೀಗಾಗಿ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸಿ ಹಲವು ಟ್ವೀಟ್ ಗಳನ್ನು ಹರಿಯಬಿಡುತ್ತಿದ್ದಾರೆ. ಈ ಟ್ವೀಟ್ ಗಳಿಗೆ ಗಂಭೀರ್ ತಮ್ಮ ಟ್ವೀಟ್ ಖಾತೆಯನ್ನು ಟ್ಯಾಗ್ ಮಾಡಲು ಅವಕಾಶ ನೀಡುವ ಮೂಲಕ ಕೇಜ್ರಿವಾಲ್ ದೂಷಿಸುವ ಮಂದಿಗೆ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ.

ಹಿಂದೆ ಹಲವು ಬಾರಿ ಗಂಭೀರ್ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸಿದ್ದರು. ಇದೀಗ ತಮ್ಮ ಅಭಿಮಾನಿಗಳು ಮಾಡುವ ಟ್ವೀಟ್ ಗಳನ್ನೂ ರಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ