ಅನಿಲ್ ಕುಂಬ್ಳೆ ಕೋಚ್ ಆಗಿರುತ್ತಿದ್ದರೆ ಕೆಎಲ್ ರಾಹುಲ್-ಹಾರ್ದಿಕ್ ಪಾಂಡ್ಯಗೆ ಈ ಗತಿ ಬರುತ್ತಿರಲಿಲ್ಲ!

ಸೋಮವಾರ, 4 ಫೆಬ್ರವರಿ 2019 (10:30 IST)
ಮುಂಬೈ: ಅನಿಲ್ ಕುಂಬ್ಳೆ ಇಂದಿಗೂ ಟೀಂ ಇಂಡಿಯಾ ಕೋಚ್ ಆಗಿರುತ್ತಿದ್ದರೆ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ಈ ಗತಿ ಬರುತ್ತಿರಲಿಲ್ಲ.


ಖಾಸಗಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಕ್ರಿಕೆಟ್ ನಿಂದ ಕೆಲವು ದಿನ ಇಬ್ಬರೂ ಕ್ರಿಕೆಟಿಗರು ನಿಷೇಧಕ್ಕೊಳಗಾಗಿದ್ದರು. ಇದರ ನಂತರ ಕ್ರಿಕೆಟಿಗರ ವರ್ತನೆ ಬಗ್ಗೆ, ಅವರಿಗೆ ಸನ್ನಡತೆ ಕುರಿತು ಅರಿವು ಮೂಡಿಸಲು ತಿಳುವಳಿಕೆ ನೀಡಬೇಕೆಂದು ರಾಹುಲ್ ದ್ರಾವಿಡ್ ಸೇರಿದಂತೆ ಹಲವು ತಜ್ಞರು ಸಲಹೆ ನೀಡಿದ್ದರು.

ಮೂಲಗಳ ಪ್ರಕಾರ ಈ ಬಗ್ಗೆ 2009 ರಲ್ಲಿಯೇ ಅನಿಲ್ ಕುಂಬ್ಳೆ ಬಿಸಿಸಿಐ ಮುಂದೆ ಇಂತಹದ್ದೊಂದು ಪ್ರಸ್ತಾಪವಿಟ್ಟಿದ್ದರಂತೆ. ಆಟಗಾರರಿಗೆ ಸನ್ನಡತೆ ಬಗ್ಗೆ, ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ವಾದಿಸಿದ್ದರಂತೆ. ಒಂದು ವೇಳೆ ಅನಿಲ್ ಕುಂಬ್ಳೆ ಕೋಚ್ ಆಗಿ ಮುಂದುವರಿದಿದ್ದರೆ ಈ ಕಾರ್ಯಕ್ರಮ ಎಂದೋ ಜಾರಿಯಾಗುತ್ತಿತ್ತೇನೋ. ಹಾಗೊಂದು ವೇಳೆ ಆಗಿದ್ದರೆ ರಾಹುಲ್-ಪಾಂಡ್ಯರಂತಹ ಪ್ರಕರಣಗಳು ಆಗುತ್ತಿರಲಿಲ್ಲ ಎನ್ನುವುದು ಕ್ರಿಕೆಟ್ ತಜ್ಞರ ಅಭಿಮತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ