ಭಾರತದ ಹೊಸ ಕೋಚ್ ಬೇಟೆ ನಿರೀಕ್ಷೆಗಿಂತ ಬೇಗ ಮುಗಿಯುವಂತೆ ಕಾಣುತ್ತಿದ್ದು, ಗುರುವಾರ ಸಂಜೆಯೊಳಗೆ ಹೊಸ ಹೆಡ್ ಕೋಚ್ ಘೋಷಣೆಯನ್ನು ಮಾಡುವುದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಖಚಿತಪಡಿಸಿದ್ದಾರೆ. ಬಿಸಿಸಿಐನ ಮೊದಲ ವಾರ್ಷಿಕ ಸಮಾವೇಶದಲ್ಲಿ ಧರ್ಮಶಾಲಾದಲ್ಲಿರುವ ಠಾಕುರ್ ಗುರುವಾರ ಬೆಳಿಗ್ಗೆ ಈ ವಿಷಯ ತಿಳಿಸಿದ್ದಾರೆ.
ಮಾಜಿ ಸ್ಪಿನ್ನರ್, ಕರ್ನಾಟಕದ ಅನಿಲ್ ಕುಂಬ್ಳೆ ಹುದ್ದೆಯನ್ನು ವಹಿಸಿಕೊಳ್ಳಲು ಮುಂಚೂಣಿಯಲ್ಲಿದ್ದು, ಬಿಸಿಸಿಐ ಪ್ರಭಾವಶಾಲಿ ವ್ಯಕ್ತಿ ರವಿಶಾಸ್ತ್ರಿ ಅವರನ್ನು ಬದಿಗಿರಿಸಿ ಕುಂಬ್ಳೆಯನ್ನು ಬೆಂಬಲಿಸಿದ್ದಾರೆ.