ಸೆಮಿಫೈನಲ್ ಸೋತಿದ್ದಕ್ಕೆ ಧೋನಿಗೆ ಧನ್ಯವಾದ ಅರ್ಪಿಸಿ 1000 ರೂಪಾಯಿ ಬಹುಮಾನ ನೀಡಿದ ಐಪಿಎಸ್ ಅಧಿಕಾರಿ

ಸೋಮವಾರ, 30 ಮಾರ್ಚ್ 2015 (17:08 IST)
ವಿಶ್ವಕಪ್ ಪಂದ್ಯದುದ್ದಕ್ಕೂ ಅಭೂತಪೂರ್ವ ಪ್ರದರ್ಶನ ನೀಡಿ ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತು ಮರಳಿದ ಭಾರತ ತಂಡಕ್ಕೆ ಅಭಿಮಾನಿಗಳು ಮನಬಂದಂತೆ ಟೀಕಿಸುತ್ತಿದ್ದಾರೆ.  ಕಾಂಗರೂಗಳು ಭಾರತೀಯರನ್ನು 95 ರನ್‌ಗಳಿಂದ ಬಗ್ಗು ಬಡಿದ ನಂತರ ಕೆಲವರು ತಮ್ಮ ಟಿವಿಯನ್ನು ಸಹ ಒಡೆದು ಹಾಕಿದ ವರದಿಯಾಗಿತ್ತು. 

ಆದರೆ ಉತ್ತರಪ್ರದೇಶದ ಐಜಿ ಅಮಿತಾಭ್ ಥಾಕೂರ್ ಅಧಿಕಾರಿ ಪಂದ್ಯ ಸೋತಿದ್ದಕ್ಕಾಗಿ ಧೋನಿಗೆ 1000 ರೂಪಾಯಿಗಳ ಚೆಕ್‌ನ್ನು ಬಹುಮಾನವಾಗಿ ಕಳುಹಿಸಿದ್ದಾರೆ. ಅಲ್ಲದೇ ಕೂಲ್ ಕ್ಯಾಪ್ಟನ್‌ಗೆ ಒಂದು ಪತ್ರವನ್ನು ಸಹ ಕಳುಹಿಸಿದ್ದಾರ. ತಮ್ಮ ಕೃತ್ಯವನ್ನು ಸಮರ್ಥಸಿಕೊಂಡಿರುವ ಅವರು, "ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯವನ್ನು ನೋಡುವ ಆಸಕ್ತಿಯನ್ನು ತೋರುವುದಿಲ್ಲ. ಇದರಿಂದ ಅವರ ಹಣದ ಉಳಿತಾಯವಾಗುತ್ತದೆ", ಎಂದಿದ್ದಾರೆ. 
 
ಐಜಿ ಸಿವಿಲ್ ಡಿಫೆನ್ಸ್ ಐಪಿಎಸ್ ಅಧಿಕಾರಿ ಅಮಿತಾಭ್ ಥಾಕೂರ್  ಧೋನಿಯವರ ರಾಂಚಿಯ ನಿವಾಸಕ್ಕೆ 1,000 ರೂಪಾಯಿಗಳನ್ನು  ಕಳುಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸುತ್ತಿದ್ದ ಅವರು "ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಹಲವು ಸರಕಾರಿ ಅಧಿಕಾರಿಗಳು  ಆ ದಿನ ಕೆಲಸಕ್ಕೆ ರಜೆ ಹಾಕಿದ್ದರು. ಇದು ದೇಶದ ಹಿತದೃಷ್ಟಿಯಿಂದ ಸೂಕ್ತವಲ್ಲ. ಆದರೆ ಪಂದ್ಯ ಸೋತ ಭಾರತ ತಂಡ ಮುಂದಿನ ಹಂತಕ್ಕೆ ಆಡಲು ಅರ್ಹತೆ ಗಳಿಸದೆ ತಾಯ್ನಾಡಿಗೆ ಮರಳಿತು. ಹಾಗಾಗಿ ಭಾರತೀಯರು ಫೈನಲ್ ಪಂದ್ಯ ವೀಕ್ಷಿಸುವ ಆಸಕ್ತಿ ಕಳೆದುಕೊಂಡರು. ಇದರಿಂದ ಹಣ ಮತ್ತು ಸಮಯದ ಉಳಿತಾಯವಾಯಿತು. ಆದ್ದರಿಂದ ಈ ಚೆಕ್ ಧನ್ಯವಾದ ತೋರ್ಪಡಿಸಲು ಕಳುಹಿಸಿರುವ ಚೆಕ್", ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ