ಹರಾಜಿನಲ್ಲಿ ಯಾರೂ ಕೊಳ್ಳದ ಬೇಸರದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಾಡಿದ ಕೆಲಸವಿದು!

ಬುಧವಾರ, 22 ಫೆಬ್ರವರಿ 2017 (10:10 IST)
ನವದೆಹಲಿ: ಒಂದು ಕಾಲದಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಿದ್ದ ಇರ್ಫಾನ್ ಪಠಾಣ್ ರನ್ನು ಈಗ ಕೇಳೋರೇ ಇಲ್ಲ. ಐಪಿಎಲ್ ಹರಾಜಿನಲ್ಲೂ ಈ ಆಲ್ ರೌಂಡರ್ ಯಾವುದೇ ತಂಡಕ್ಕೂ ಬೇಡವಾದರು.

 
ಅದೇ ಬೇಸರದಲ್ಲಿ ಅವರು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ. “ಹಿಂದೊಮ್ಮೆ ನನ್ನ ಕಾಲಿಗೆ ನಾಲ್ಕು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆಗ ವೈದ್ಯರು ನಾನಿನ್ನು ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಎಂತಹಾ ನೋವು ಬೇಕಾದರೂ ಸಹಿಸುತ್ತೇನೆ. ಆದರೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎನ್ನುವ ನೋವು ನನಗೆ ಸಹಿಸಲು ಸಾಧ್ಯವಿಲ್ಲ ಎಂದಿದ್ದೆ.

ಇದಾದ ಮೇಲೆ ನನ್ನ ವೃತ್ತಿ ಜೀವನದಲ್ಲಿ ಹಲವು ಕಠಿಣ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಸದ್ಯಕ್ಕೆ ನನ್ನ ಮುಂದೆ ಈ ಕಠಿಣ ಪರಿಸ್ಥಿತಿಯಿದೆ. ಅದನ್ನೂ ನಾನು ಮೆಟ್ಟಿ ನಿಲ್ಲುತ್ತೇನೆ. ನನಗೆ ಒಳಿತು ಬಯಸುವ ಅಭಿಮಾನಿಗಳಿಗಾಗಿ ಈ ಸಂದೇಶ ಪ್ರಕಟಿಸುತ್ತಿದ್ದೇನೆ” ಎಂದು ಪಠಾಣ್ ಪತ್ರದಲ್ಲಿ ಹೇಳಿದ್ದಾರೆ. ಇದನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ