ಆದರೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡದ ಯಾವ ಆಟಗಾರರು ಪ್ರತಿರೋಧ ತೋರುವ ಮನಸ್ಸು ಮಾಡಲಿಲ್ಲ. ಕೇದಾರ್ ಜಾಧವ್ (56 ರನ್) ಮಾತ್ರ ಅರ್ಧ ಶತಕ ಗಳಿಸಿ ನಿರ್ಗಮಿಸಿದರು. ನಾಯಕ ಮನೋಜ್ ತಿವಾರಿ 24, ಜೀವನ್ಜೋತ್ ಸಿಂಗ್ 38ರ ಮೊತ್ತಕ್ಕೆ ಮರಳಿದರೆ ರಿಷಿ ಧವನ್, ಜಯಂತ್ ಯಾದವ್ ಹಾಗೂ ವರುಣ್ ಆರೋನ್ ತಲಾ 10 ರನ್ ಗಳಿಸಿದರು. ಉಳಿದ ಯಾವ ಆಟಗಾರರು ಎರಡಂಕಿ ಮೊತ್ತ ತಲುಪಲಿಲ್ಲ. ಪರಿಣಾಮ ಕರ್ನಾಟಕ ನೀಡಿದ 403 ಮೊತ್ತದ ಸನಿಹಕ್ಕೂ ಸುಳಿಯಲು ವಿಫಲವಾದ ಶೇಷ ಭಾರತ 43.3 ಓವರ್ಗಳಲ್ಲಿ ಕೇವಲ 156 ರನ್ಗೆ ಆಲೌಟಾಯಿತು. ಶ್ರೇಯಸ್ ಗೋಪಾಲ್ (39ಕ್ಕೆ4) ಮತ್ತು ಅಭಿಮನ್ಯು ಮಿಥುನ್ (40 ಕ್ಕೆ 3 ವಿಕೆಟ್) ಭಾರತ ಇತರರ ತಂಡಕ್ಕೆ ನೆಲ ಕಚ್ಚಿ ನಿಲ್ಲಲು ಅವಕಾಶವನ್ನೇ ನೀಡಲಿಲ್ಲ. ಶರತ್ ಹಾಗೂ ಅರವಿಂದ್ ತಲಾ 1 ವಿಕೆಟ್ ಪಡೆದರು.