ಕ್ರಿಕೆಟಿಗ ಕೆಎಲ್ ರಾಹುಲ್ ಬೇಸರಕ್ಕೆ ಕಾರಣವೇನು?

ಸೋಮವಾರ, 27 ಮಾರ್ಚ್ 2017 (11:01 IST)
ಧರ್ಮಶಾಲಾ: ನಾಲ್ಕು ಪಂದ್ಯಗಳಿಂದ ಐದು ಅರ್ಧಶತಕ, ಉತ್ತಮ ಆರಂಭ ಕೊಟ್ಟಿದ್ದಕ್ಕೆ ಮೆಚ್ಚುಗೆ.. ಹೀಗಿದ್ದೂ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್  ಬೇಸರದಲ್ಲಿದ್ದಾರಂತೆ. ಕಾರಣ ಏನು ಗೊತ್ತಾ?

 

ಪ್ರತೀ ಬಾರಿಯೂ ಅವರು ಅರ್ಧಶತಕ ದಾಖಲಿಸಿದ ಮೇಲೆ ಶತಕ ದಾಖಲಿಸಿಕೊಳ್ಳುವ ಅವಕಾಶ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತಂಡಕ್ಕೆ ಉತ್ತಮ ಆರಂಭ ಕೊಡುತ್ತಿದ್ದಾರೆ ಎನ್ನುವುದೇನೋ ನಿಜ. ಆದರೆ ಅರ್ಧಶತಕದ ಮೇಲೆ ಅವರ ಸ್ಕೋರ್ ಅಲುಗಾಡುತ್ತಿಲ್ಲ.

 
ಇದಕ್ಕೆ ಅವರ ಸ್ವಯಂಕೃತ ತಪ್ಪುಗಳೇ ಕಾರಣ ಎನ್ನುವುದನ್ನೂ ಅವರು ಅರ್ಥ ಮಾಡಿಕೊಂಡಿದ್ದಾರೆ. ಅರ್ಧಶತಕ ದಾಖಲಿಸದ ಮೇಲೂ ಶಾಟ್ ಸೆಲೆಕ್ಷನ್ ವಿಚಾರದಲ್ಲಿ ಎಡವುತ್ತಿರುವುದೇ ತಾನು ಮಾಡುತ್ತಿರುವ ತಪ್ಪು ಎನ್ನುವುದನ್ನು ರಾಹುಲ್ ಒಪ್ಪಿಕೊಂಡಿದ್ದಾರೆ.

 
‘ನಾನು ಪ್ರತೀ ಬಾರಿಯೂ ಉತ್ತಮ ಆರಂಭ ಪಡೆದಿದ್ದೇನೆ. ಆದರೆ ಶತಕ ಗಳಿಸಲಾಗಲಿಲ್ಲ ಎನ್ನುವುದೇ ಬೇಸರದ ಸಂಗತಿ. ಹಾಗಂತ ನನಗೆ ಪಶ್ಚಾತ್ತಾಪವಿಲ್ಲ. ಆಸ್ಟ್ರೇಲಿಯಾ ಬೌಲರ್ ಗಳು ಸವಾಲಿನ ಬೌಲಿಂಗ್ ನಡೆಸುತ್ತಿದ್ದರು. ಅದಕ್ಕೆ ಚೆನ್ನಾಗಿ ಉತ್ತರಿಸಿದ್ದೇನೆ ಎನ್ನುವ ತೃಪ್ತಿಯಿದೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ