ಹೀಗೆಲ್ಲಾ ಹೇಳಕ್ಕೆ ನಾಚಿಕೆಯಾಗಲ್ವಾ? ಕೆಎಲ್ ರಾಹುಲ್ ವಿರುದ್ಧ ತಿರುಗಿ ಬಿದ್ದ ಫ್ಯಾನ್ಸ್

ಸೋಮವಾರ, 30 ನವೆಂಬರ್ 2020 (09:36 IST)
ಸಿಡ್ನಿ: ಏಕದಿನ ಸರಣಿ ಸೋತ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಅಭಿಮಾನಿಗಳಿಗೆ ತೀವ್ರ ಸಿಟ್ಟಿದೆ. ಅದರ ನಡುವೆಯೇ ಕೆಎಲ್ ರಾಹುಲ್ ನೀಡಿದ ಹೇಳಿಕೆಯೊಂದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.


ಸೋಲಿನ ಬಳಿಕ ಸಾಬೂಬು ಹೇಳುವುದು ಮಾಮೂಲು. ಆದರೆ ರಾಹುಲ್ ಎದುರಾಳಿ ತಂಡದ ಆಟಗಾರ ಡೇವಿಡ್ ವಾರ್ನರ್ ಗಾಯಾಳುವಾಗಿದ್ದು ಭಾರತಕ್ಕೆ ಶುಭ ಸುದ್ದಿ ಎಂದು ಜೋಕ್ ಮಾಡಿದ್ದಾರೆ. ಈ ಜೋಕ್ ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಾಗಲ್ಲ. ಇದು ವೃತ್ತಿಪರತೆ ಸೂಚಿಸಲ್ಲ. ಗೆಲ್ಲಬೇಕೆಂದರೆ ಎದುರಾಳಿ ಆಟಗಾರರು ಗಾಯವಾಗಬೇಕು ಎನ್ನುವ ಮನೋಭಾವ ತೀರಾ ಕೆಳಮಟ್ಟದ್ದು. ಹೀಗೆ ಹೇಳಲು ನಿಮಗೆ ನಾಚಿಕೆಯಾಗಲ್ವಾ ಎಂದು ನೆಟ್ಟಿಗರು ರಾಹುಲ್ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ