ಹೌದು, ರೈನಾ ಮತ್ತು ಧವನ್ ಕೊಹ್ಲಿ ಅವರಿಗೆ ಆಪ್ತ ಮಿತ್ರರಂತೆ. ದೆಹಲಿ ಪರ ರಣಜಿ ಆಡುವಾಗಲೇ ಈ ಮೂವರಲ್ಲಿ ಆಳವಾದ ಸ್ನೇಹವಿತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿ ತಮ್ಮ ಪ್ರಾಣ ಸ್ನೇಹಿತರನ್ನು ಉಳಿಸಿಕೊಳ್ಳಲು ಕೊಹ್ಲಿ ತಮ್ಮ ಪ್ರಭಾವವನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ ಎಂಬುದು ಕೆಲವರ ವಾದ.
ಜತೆಗೆ ಕೊಹ್ಲಿ ನೇತೃತ್ವದಲ್ಲಿ ತಂಡ ತೋರುತ್ತಿರುವ ಗೆಲುವಿನ ರಿದಂನ್ನು ಬ್ರೇಕ್ ಮಾಡೋದು ಆಯ್ಕೆ ಸಮಿತಿಗೆ ಬೇಕಿರಲಿಲ್ಲ. ಸ್ನೇಹಿತರನ್ನು ತಂಡದಿಂದ ಬಿಟ್ಟು ಕೊಹ್ಲಿ ಅವರನ್ನು ಅಸಮಾಧಾನಕ್ಕೆ ತಳ್ಳುವುದು ಸಂದೀಪ್ ಪಾಟೀಲ್ ತಂಡಕ್ಕೆ ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ತಮ್ಮ ಕ್ರಮವನ್ನು ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ ಸಹ. ಏಕದಿನ ಕ್ರಿಕೆಟ್ನಲ್ಲಿ ಗೇಮ್ ಚೇಂಜರ್ ಆಗಿರುವ ರೈನಾ ಮತ್ತು ಧವನ್ ಅವರಿಗೆ ಅವಕಾಶ ನೀಡುವುದರಲ್ಲಿ ತಪ್ಪಿಲ್ಲ ಎಂಬುವುದು ಅವರ ವಾದ. ಸಮರ್ಥ ಯುವ ತಂಡವನ್ನು ಕಟ್ಟುವ ಉದ್ದೇಶವೂ ಇದರಲ್ಲಿದೆ.