ಪಣಜಿ: ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಕೀಚ್ ಹೇಝಲ್ ಮದುವೆ ಇಷ್ಟೆಲ್ಲಾ ಗ್ರ್ಯಾಂಡ್ ಆಗಿ ನಡೆಯಿತು. ಟೀಂ ಇಂಡಯಾದ ಅನೇಕ ಕ್ರಿಕೆಟಿ್ಗರು ಈ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡರು. ಆದರೆ ಏಕದಿನ ನಾಯಕ ಎಂಎಸ್ ಧೋನಿ ಬಂದಿರಲಿಲ್ಲ. ಇದು ಅನೇಕ ಊಹಾಪೋಹಗಳಿಗೆ ಕಾರಣವಾಯ್ತು.
ಇವರಿಬ್ಬರ ನಡುವೆ ವೈಮನಸ್ಯವಿದ್ದುದರಿಂದಲೇ ಧೋನಿಯನ್ನು ಯುವಿ ಮದುವೆಗೆ ಆಹ್ವಾನಿಸಿರಲಿಲ್ಲ. ಯೋಗರಾಜ್ ಬಹಿರಂಗವಾಗಿ ಧೋನಿ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದರಿಂದಲೇ ಧೋನಿ ಮದುವೆಗೆ ಬರಲಿಲ್ಲ ಎಂದೆಲ್ಲಾ ಸುದ್ದಿಯಾಗಿತ್ತು.
ಆದರೆ ಚಂಢೀಗಢದಲ್ಲಿ ನಡೆದ ಮದುವೆಗೆ ಬಾರದ ಧೋನಿ ಗೋವಾದಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮಕ್ಕೆ ಬರಲಿದ್ದಾರಂತೆ. ಅಲ್ಲದೆ ಯುವಿ ಜತೆ ದಿಬ್ಬಣದಲ್ಲಿ ಬರಲಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕಾಗಿ ಈಗಾಗಲೇ ಧೋನಿ ಗೋವಾಗೆ ಬಂದಿಳಿದಿದ್ದಾರೆ ಎಂಬು ಸುದ್ದಿ ಹಬ್ಬಿದೆ.
ಧೋನಿ ಜತೆ ಸಚಿನ್ ತೆಂಡುಲ್ಕರ್ ಕೂಡಾ ಇಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಗಳಲ್ಲಿ ಮನೆ ಮಗನಂತೆ ಭಾಗವಹಿಸಲಿದ್ದಾರಂತೆ. ಯುವಿಗೆ ಸಚಿನ್ ಎಂದರೆ ಎಲ್ಲಿಲ್ಲದ ಗೌರವ. ಹೀಗಾಗಿ ಸಚಿನ್ ಪಾಜಿ ಆಶೀರ್ವಾದವಿಲ್ಲದೆ ಅವರ ಮದುವೆ ಹೇಗೆ ಸಂಪೂರ್ಣವಾದೀತು?
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ