ಕನ್ನಡಿಗ ಕರುಣ್ ನಾಯರ್ ಜತೆ ತಮಿಳಿನಲ್ಲಿ ಮಾತನಾಡುತ್ತಿದ್ದ ಮುರಳಿ ವಿಜಯ್!

ಸೋಮವಾರ, 19 ಡಿಸೆಂಬರ್ 2016 (10:51 IST)
ಚೆನ್ನೈ: ಕ್ರಿಕೆಟಿಗರು ಬ್ಯಾಟಿಂಗ್ ಮಾಡುವಾಗ ಇನ್ನೊಂದು ತುದಿಯಲ್ಲಿರುವ ಬ್ಯಾಟ್ಸ್ ಮನ್ ಜತೆಗೆ ಗೇಮ್ ಪ್ಯ್ಲಾನ್ ಬಗ್ಗೆ ಮಾತನಾಡುವುದು ಸಹಜ. ಆದರೆ ಎದುರಾಳಿಗೆ ಗೊತ್ತಿರುವ ಭಾಷೆಯಲ್ಲಿ ಮಾತನಾಡಿದರೆ ಅವರ ಯೋಜನೆ ಎದುರಾಳಿಗೆ ಗೊತ್ತಾಗುತ್ತದಂತೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಾರೆ.

ಅದೇ ರೀತಿ ಸದ್ಯಕ್ಕೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಯುವ ಆಟಗಾರ ಕರುಣ್ ನಾಯರ್ ಗೆ ಮುರಳಿ ವಿಜಯ್ ಕೆಲವೊಂದು ಸಲಹೆ ಕೊಡುತ್ತಿದ್ದಾರೆ. ಆದರೆ ತಮಿಳಿನಲ್ಲಿ! ಮುರಳಿ ತಮಿಳುನಾಡಿನವರು. ಕರುಣ್ ಕರ್ನಾಟಕದವರು. ಆದರೆ ಇಂಗ್ಲಿಷ್ ನಲ್ಲಿ, ಹಿಂದಿಯಲ್ಲಿ ಮಾತನಾಡಿದರೆ ಎದುರಾಳಿಗೆ ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಆಂಗ್ಲರಿಗೆ ತಲೆ ಬುಡ ಗೊತ್ತಿಲ್ಲದ ತಮಿಳಿನಲ್ಲಿ ವ್ಯವಹರಿಸುತ್ತಿದ್ದರು.

ನಿನ್ನೆ ಇನ್ನೋರ್ವ ಕನ್ನಡಿಗ ಕೆಎಲ್ ರಾಹುಲ್ 199 ಕ್ಕೆ ಔಟಾಗಿ ನಿರಾಸೆ ಅನುಭವಿಸಿದ್ದರು. ಇಂದು ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಶತಕ ಗಳಿಸುವ ಹೊಸ್ತಿಲಲ್ಲಿದ್ದರು. ಹಾಗಾಗಿ ರಾಹುಲ್ ಮಾಡಿದ ತಪ್ಪನ್ನು ಕರುಣ್ ಮಾಡದಂತೆ ವಿಜಯ್ ಆಗಾಗ ಸಲಹೆ ಕೊಡುತ್ತಿದ್ದರು. ಅಂತೂ ಕರುಣ್ ಚೊಚ್ಚಲ ಶತಕ ಗಳಿಸಿಯೇ ಬಿಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ