ಪಾರ್ಥಿವ್ ಪಟೇಲ್ ಪ್ರದರ್ಶನ, ವೃದ್ಧಿಮಾನ್ ಸಹಾಗೆ ಕುತ್ತು

ಬುಧವಾರ, 30 ನವೆಂಬರ್ 2016 (11:18 IST)
ಮೊಹಾಲಿ: ಈಗೀಗ ಟೀಂ ಇಂಡಿಯಾದಲ್ಲಿ ಹೇಗಾಗಿದೆ ಎಂದರೆ ಒಂದು ಪಂದ್ಯದಿಂದ ಹೊರಗುಳಿಯುವಂತಾದರೆ, ಮತ್ತೊಮ್ಮೆ ತಂಡಕ್ಕೆ ಮರಳುವುದು ಕಷ್ಟ. ಅವರ ಸ್ಥಾನದಲ್ಲಿ ಆಡುವ ಬದಲಿ ಆಟಗಾರ ಗಾಯಗೊಂಡ ಆಟಗಾರನ ಸ್ಥಾನಕ್ಕೆ ಕುತ್ತು ತರುತ್ತಾನೆ. ಈಗ ವೃದ್ಧಿಮಾನ್ ಸಹಾ ವಿಷಯದಲ್ಲೂ ಅದೇ ಆಗಿದೆ.

ಗಾಯಗೊಂಡ ಕಾರಣಕ್ಕೆ ಮೂರನೇ  ಟೆಸ್ಟ್ ನಿಂದ ಸಹಾ ಹೊರಗುಳಿದಿದ್ದರು. ಅವರ ಸ್ಥಾನಕ್ಕೆ ಪಾರ್ಥಿವ್ ಪಟೇಲ್ ಬಂದರು. ಕೀಪರ್ ಆಗಿ ಬಂದ ಪಾರ್ಥಿವ್ ಆರಂಭಿಕರಾಗಿ ಎರಡೂ ಇನಿಂಗ್ಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇದೀಗ ಪಾರ್ಥಿವ್ ರನ್ನು ತಂಡದಿಂದ ಕೈ ಬಿಡುವಂತಿಲ್ಲ. ಸಹಾ ಚೇತರಿಸಿಕೊಂಡರೂ ತಂಡದಲ್ಲಿ ಅವರ ಸ್ಥಾನ ಏನೆಂಬುದು ಖಚಿತವಿಲ್ಲ.

ಇದರಿಂದ ಸಹಾ ಮೇಲೆ ಒತ್ತಡ ಬೀಳುತ್ತದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಸಹಾ ತಂಡಕ್ಕೆ ಮರಳಿದರೂ, ಪಾರ್ಥಿವ್ ರನ್ನು ಆರಂಭಿಕರಾಗಿ ತಂಡದಲ್ಲಿ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಹಾಗಿದ್ದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಸ್ಥಾನಕ್ಕೆ ಕುತ್ತು ಬರಬಹುದು. ಅಥವಾ ರಾಹುಲ್ ಮರಳಿದ ಮೇಲೆ ಸಹಾ ಸ್ಥಾನ ಕಳೆದುಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ