ಟೀಂ ಇಂಡಿಯಾ ಗೆದ್ದರೂ ಹೊಗಳಿಸಿಕೊಂಡಿದ್ದು ರಾಹುಲ್ ದ್ರಾವಿಡ್!

ಬುಧವಾರ, 20 ಜನವರಿ 2021 (10:53 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸರಣಿ ಗೆಲುವು ಸಾಧಿಸಿದರೂ ಹೊಗಳಿಸಿಕೊಂಡಿದ್ದು ‘ವಾಲ್’ ರಾಹುಲ್ ದ್ರಾವಿಡ್.


ಟೀಂ ಇಂಡಿಯಾ ಯುವ ಕ್ರಿಕೆಟಿಗರೇ ಈ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅದರಲ್ಲೂ ವಾಷಿಂಗ್ಟನ್ ಸುಂದರ್, ಶಬ್ನಂ ಗಿಲ್, ರಿಷಬ್ ಪಂತ್, ಟಿ ನಟರಾಜನ್ ಮುಂತಾದವರು ಪ್ರಮುಖ ಪಾತ್ರವಹಿಸಿದರು. ಇವರೆಲ್ಲರೂ ಭಾರತ ಎ ತಂಡದಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದವರು. ಕೋಚ್ ದ್ರಾವಿಡ್ ಈ ಯುವ ಕ್ರಿಕೆಟಿಗರನ್ನು ತಯಾರು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಾಗಿ ದ್ರಾವಿಡ್ ರನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ