ಕರ್ನಾಟಕ ಚುನಾವಣೆಗೆ ರಾಹುಲ್ ದ್ರಾವಿಡ್!?

ಬುಧವಾರ, 14 ಫೆಬ್ರವರಿ 2018 (16:52 IST)
ಬೆಂಗಳೂರು: ಕ್ರಿಕೆಟ್ ನ ವಾಲ್ ಎಂದೇ ಕರೆಸಿಕೊಂಡಿರುವ ರಾಹುಲ್ ದ್ರಾವಿಡ್ ಈ ಬಾರಿಯ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ! ಆದರೆ ರಾಜಕೀಯಕ್ಕೆ ಬರುತ್ತಿಲ್ಲ.
 

ರಾಹುಲ್ ದ್ರಾವಿಡ್ ರಾಜ್ಯ ಚುನಾವಣೆಯ ಪ್ರಚಾರ ರಾಯಭಾರಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಚುನಾವಣಾ ಆಯೋಗ ಸಿನಿಮಾ,  ಕ್ರಿಕೆಟ್ ಕ್ಷೇತ್ರದ ಹೆಸರಾಂತ ಮುಖದ ಹುಡುಕಾಟದಲ್ಲಿದೆ.

ಇತ್ತೀಚೆಗಷ್ಟೇ ಅಂಡರ್ 19 ವಿಶ್ವಕಪ್ ಗೆಲ್ಲಿಸಿದ ಕೋಚ್ ದ್ರಾವಿಡ್ ಹೆಸರು ರಾಯಭಾರಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ದ್ರಾವಿಡ್ ರನ್ನು ಇನ್ನೂ ಚುನಾವಣಾ ಆಯೋಗ ಸಂಪರ್ಕಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ