ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಗೆಲುವು

ಶುಕ್ರವಾರ, 27 ಅಕ್ಟೋಬರ್ 2017 (17:35 IST)
ಬೆಂಗಳೂರು: ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಗ್ರೂಪ್ ಎ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಹೈದರಾಬಾದ್ ವಿರುದ್ಧ 59 ರನ್ ಗಳ ಗೆಲುವು ಕಂಡಿದೆ.

 
ಗೆಲುವಿಗೆ 379 ರನ್ ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್ ನಾಲ್ಕನೇ ಮತ್ತು ಅಂತಿಮ ದಿನವಾದ ಇಂದು ದ್ವಿತೀಯ ಇನಿಂಗ್ಸ್ ನಲ್ಲಿ 320 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 59 ರನ್ ಗಳ ಗೆಲುವು ಸಾಧಿಸಿತು.

ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಭಾರಿಸಿದ್ದ ಕರುಣ್ ನಾಯರ್ ಪಂದ್ಯ ಶ್ರೇಷ್ಠರಾದರು. ಕರ್ನಾಟಕ ಪರ
ಶ್ರೇಯಸ್ ಗೋಪಾಲ್ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಿತ್ತರೆ, ಅವರಿಗೆ ಉತ್ತಮ ಸಾಥ್ ನೀಡಿದ ಕೆ ಗೌತಮ್ 3 ವಿಕೆಟ್ ಕಿತ್ತು ಮಿಂಚಿದರು. ಇದರೊಂದಿಗೆ ರಣಜಿಯಲ್ಲಿ ಕರ್ನಾಟಕ ಗೆಲುವಿನ ಶುಭಾರಂಭ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ