ಕುಂಬ್ಳೆ ಅವರು 21 ಜನರ ಪಟ್ಟಿಯ ಅಂತಿಮ ಸಂದರ್ಶನದಲ್ಲಿ ಇರಲಿಲ್ಲ. ಆದರೆ ಸಲಹಾ ಸಮಿತಿಯು ಸೂಚಿಸಿದ ಮೇಲೆ ಕುಂಬ್ಳೆ ಹೆಸರನ್ನು ಸೇರಿಸಲಾಯಿತು. ಸೌರವ್ ಗಂಗೂಲಿ ಕುಂಬ್ಳೆಯನ್ನು ನೇಮಿಸುವ ಪ್ರಸ್ತಾಪ ಮಂಡಿಸಿದರು. ಅಂತಿಮವಾಗಿ ಸಚಿನ್ ಮತ್ತು ಲಕ್ಷ್ಮಣ್ ಬೆಂಬಲವನ್ನು ಗಂಗೂಲಿ ಗಳಿಸಿದರು. ಸಲಹಾ ಸಮಿತಿಯ ಅಭಿಪ್ರಾಯವನ್ನು ಬಿಸಿಸಿಐ ಅಂತಿಮವಾಗಿ ಅನುಮೋದಿಸಿತು.