ಇಂದಿನಿಂದ ಗ್ರೇಟರ್ ನೊಯ್ಡಾದಲ್ಲಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದ್ದು ರಾಷ್ಟ್ರೀಯ ತಂಡದ ಆಟಗಾರರಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರವೀಂದ್ರ ಜಡೇಜಾ ಕೂಡ ಕಣಕ್ಕಿಳಿಯಲಿದ್ದಾರೆ. ಶಿಖರ್ ಧನ್ ಇಂಡಿಯಾ ರೆಡ್ ತಂಡದಲ್ಲಿದ್ದರೆ, ಶರ್ಮಾ ಮತ್ತು ರವೀಂದ್ರ ಜಡೇಜಾ ಇಂಡಿಯಾ ಬ್ಲ್ಯೂ ತಂಡಕ್ಕಾಗಿ ಆಡಲಿದ್ದಾರೆ.
ಕಳೆದ ಒಂದು ವರ್ಷದಿಂದ ಈ ಮೂವರ ಪ್ರದರ್ಶನ ಅತ್ಯಂತ ಪೇಲವವಾಗಿದ್ದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಬಿಸಿಸಿಐ ಆ ಅವಕಾಶವನ್ನು ಒದಗಿಸಿದೆ. ಇಂದು ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಈ ಮೂವರು ಈ ತಿಂಗಳಾಂತ್ಯದಿಂದ ನಡೆಯಲಿರುವ ಕಿವೀಸ್ ವಿರುದ್ಧದ ಸರಣಿಯಲ್ಲಿ ಚಾನ್ಸ್ ಪಡೆಯಲಿದ್ದಾರೆ. ಹೀಗಾಗಿ ದುಲೀಪ್ ಟ್ರೋಫಿ ಫೈನಲ್ ಈ ಜಡ್ಡು, ಶರ್ಮಾ ಮತ್ತು ಧನ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಣಿಸಿದೆ. ಇಂದಿನ ಪಂದ್ಯದಲ್ಲಿ ಆಯ್ಕೆಗಾರರು ಮೂವರ ಮೇಲೆ ತಮ್ಮ ಚಿತ್ತವನ್ನು ನೆಟ್ಟಿದ್ದಾರೆ.