ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ನ್ನು ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಮೊದಲ ನಾಲ್ಕು ಪಂದ್ಯಗಳಲ್ಲಿ ದಯನೀಯ ಸೋಲು ಕಂಡಿದ್ದ ರೋಹಿತ್ ಬಳಗದ ಅದೃಷ್ಟ ರಿತಿಕಾ ಆಗಮನದಿಂದ ಸಂಪೂರ್ಣವಾಗಿ ಬದಲಾಗಿತ್ತು. ಪಂದ್ಯಗಳನ್ನು ವೀಕ್ಷಿಸಲು ರಿತಿಕಾ ಮೈದಾನಕ್ಕೆ ಬಂದ ಬಳಿಕ ಎಲ್ಲ ಪಂದ್ಯಗಳನ್ನು ರೋಹಿತ್ ಬಳಗ ಗೆಲ್ಲುತ್ತಾ ಹೋಯಿತು. ರೋಹಿತ್ ಸಮರ್ಥ ನಾಯಕತ್ವದ ಹಿಂದಿನ ಪ್ರೇರಕ ಶಕ್ತಿ ರಿತಿಕಾರವರೇ ಆಗಿದ್ದರು.