ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದರೂ ತಂಡದ ಜತೆ ಪ್ರಯಾಣ ಬೆಳೆಸದ ರೋಹಿತ್ ಶರ್ಮಾ, ಕೇದಾರ್ ಜಾದವ್!

ಗುರುವಾರ, 25 ಮೇ 2017 (10:34 IST)
ಮುಂಬೈ: ನಿನ್ನೆ ಸಚಿನ್ ತೆಂಡುಲ್ಕರ್ ರ ಜೀವನಾಧಾರಿತ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರ ವೀಕ್ಷಿಸಿ ಟೀಂ ಇಂಡಿಯಾ ಕ್ರಿಕೆಟಿಗರು ಇಂಗ್ಲೆಂಡ್ ವಿಮಾನ ಹತ್ತಿದ್ದರೆ, ರೋಹಿತ್ ಶರ್ಮಾ ಮತ್ತು ಕೇದರಾ ಜಾದವ್ ಮನೆಗೆ ಮರಳಿದರು.

 
ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಳಗದಲ್ಲಿ ಆಯ್ಕೆಯಾಗಿದ್ದರೂ, ಇವರು ತಂಡದೊಂದಿಗೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸದೇ ಇದ್ದಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ರೋಹಿತ್ ಶರ್ಮಾ ವಿನಾಯಿತಿ ಪಡೆದಿದ್ದು ತಡವಾಗಿ ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಇನ್ನು ಕೇದಾರ್ ಜಾದವ್ ಗೆ ಇನ್ನೂ ವೀಸಾ ಸಿಕ್ಕಿಲ್ಲವಂತೆ. ಹಾಗಾಗಿ ಅವರೂ ತಡವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಉಳಿದಂತೆ ಎಲ್ಲಾ ಆಟಗಾರರೂ ಇಂಗ್ಲೆಂಡ್ ನತ್ತ ಪ್ರಯಾಣ ಬೆಳೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ