ನಿಷೇಧ ಮುಗಿಸಿ ಕ್ರಿಕೆಟ್ ಗೆ ಮರಳಲಿರುವ ಎಸ್ ಶ್ರೀಶಾಂತ್

ಶುಕ್ರವಾರ, 19 ಜೂನ್ 2020 (09:47 IST)
ಕೊಚ್ಚಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದ ಕೇರಳ ಮೂಲದ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮತ್ತೆ ಕ್ರಿಕೆಟ್ ಗೆ ಮರಳಲಿದ್ದಾರೆ.


ಅಜೀವ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಕಳೆದ ವರ್ಷ ಸುಪ್ರೀಂಕೋರ್ಟ್ ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಸಿ ಶಿಕ್ಷೆ ಕಡಿತ ಮಾಡಿಕೊಂಡಿದ್ದರು. ಅದರಂತೆ ಸೆಪ್ಟೆಂಬರ್ 13 ‍ಕ್ಕೆ ಶ್ರೀಶಾಂತ್ ಶಿಕ್ಷೆಯ ಅವಧಿ ಮುಗಿಯಲಿದೆ.

ಹೀಗಾಗಿ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿಕೊಂಡರೆ ಶ್ರೀಶಾಂತ್ ರನ್ನು ಕೇರಳ ರಣಜಿ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಕೇರಳ ತಂಡದ ಕೋಚ್ ಟಿನು ಯೊಹಾನನ್ ಹೇಳಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಶಾಂತ್ ನನಗೆ ಮತ್ತೊಂದು ಅವಕಾಶ ನೀಡುತ್ತಿರುವ ಕೇರಳ ಕ್ರಿಕೆಟ್ ಅಸೋಸಿಯೇಷನ್ ಗೆ ಧನ್ಯವಾದ. ನನ್ನ ಫಿಟ್ನೆಸ್ ಸಾಬೀತುಪಡಿಸಿ ತಂಡಕ್ಕೆ ಮರಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ