ವಿವಿಧ ರೀತಿಯ ಆಮ್ಲೆಟ್ ತಯಾರಿಸಿ ಗೆಳೆಯರಿಗೆ ತಿನ್ನಿಸಿದ ಸಚಿನ್ ಪುತ್ರ ಅರ್ಜುನ್

ಮಂಗಳವಾರ, 17 ಮಾರ್ಚ್ 2015 (15:53 IST)
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮಧ್ಯಪ್ರದೇಶದ ಭೋಪಾಲ್‌ಗೆ ಎರಡು ದಿನಗಳ ಖಾಸಗಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ 9 ತರಗತಿಯಲ್ಲಿ ಓದುತ್ತಿರುವ ಅರ್ಜುನ್ ತಂದೆಯಂತೆ ಕೇವಲ ಕ್ರಿಕೆಟ್ ಆಟದಲ್ಲಷ್ಟೇ ಆಸಕ್ತರಾಗಿಲ್ಲ.  ಆತನಿಗೆ ಉತ್ತಮವಾಗಿ ಅಡುಗೆ ಮಾಡಲು ಸಹ ಬರುತ್ತದೆ . ಮೂಲಗಳ ಪ್ರಕಾರ ತಾನು ಉಳಿದುಕೊಂಡಿರುವ ಹೋಟೆಲ್‌ನ ಅಡುಗೆ ಕೋಣೆ ಒಳಹೊಕ್ಕ ಅರ್ಜುನ್ ತನಗೆ ಮತ್ತು ತನ್ನ ಸ್ನೇಹಿತರಿಗಾಗಿ ವಿಧ ವಿಧದ ಆಮ್ಲೆಟ್ ತಯಾರಿಸಿದ ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

ಅರ್ಜುನ್ ಒಬ್ಬ ಸರಳ ಸ್ವಭಾವದ ಬಾಲಕ ಮತ್ತು ಆತನಲ್ಲಿ ಕಿಂಚಿತ್ತೂ ಸಹ ಅಹಂಕಾರವಿಲ್ಲ ಎಂದು ಹೋಟೆಲ್ ಸಿಬ್ಬಂದಿ ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ಅರ್ಜುನ್ ಮುಂಬೈಗೆ ಮರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ