ಸೌರವ್ ಗಂಗೂಲಿಗೆ ಅನಾಮಧೇಯ ಕೊಲೆ ಬೆದರಿಕೆ ಪತ್ರ
ಜನವರಿ 19 ರಂದು ಮಿಡ್ನಾಪುರ್ ಗ್ರಾಮದಲ್ಲಿ ನಡೆಯಲಿರುವ ಕ್ರೀಡಾ ಸನ್ಮಾನ ಸಮಾರಂಭದಲ್ಲಿ ಅವರು ಭಾಗವಹಿಸಬೇಕಿದೆ. ಇದರಲ್ಲಿ ಭಾಗವಹಿಸಿದರೆ ಜೀವಕ್ಕೆ ಅಪಾಯ ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಸಲಾಗಿದೆ.
ಈ ಹಿನ್ನಲೆಯಲ್ಲಿ ಗಂಗೂಲಿ ಪೊಲೀಸ್ ದೂರು ದಾಖಲಿಸಿರುವುದಲ್ಲದೆ, ಕಾರ್ಯಕ್ರಮ ಸಂಘಟಕರಿಗೂ ವಿಷಯ ತಿಳಿಸಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಅವರಿನ್ನೂ ನಿರ್ಧರಿಸಿಲ್ಲವಂತೆ. ಬೆದರಿಕೆ ಪತ್ರ ಬರೆದವರು ಯಾರು ಮತ್ತು ಯಾಕಾಗಿ ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.