ಸೌರವ್ ಗಂಗೂಲಿಗೆ ಅನಾಮಧೇಯ ಕೊಲೆ ಬೆದರಿಕೆ ಪತ್ರ

ಮಂಗಳವಾರ, 10 ಜನವರಿ 2017 (08:21 IST)
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಅನಾಮಧೇಯ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ತಿಂಗಳ ಕೊನೆಯಲ್ಲಿ ಅವರ ಜಿಲ್ಲೆಯಲ್ಲಿ ನಡೆಯಲಿರುವ ಸನ್ಮಾನ ಸಮಾರಂಭಕ್ಕೆ ಹಾಜರಾಗದಂತೆ ಬೆದರಿಕೆ ಬಂದಿದೆ.

ಜನವರಿ 19 ರಂದು ಮಿಡ್ನಾಪುರ್ ಗ್ರಾಮದಲ್ಲಿ ನಡೆಯಲಿರುವ ಕ್ರೀಡಾ ಸನ್ಮಾನ ಸಮಾರಂಭದಲ್ಲಿ ಅವರು ಭಾಗವಹಿಸಬೇಕಿದೆ. ಇದರಲ್ಲಿ ಭಾಗವಹಿಸಿದರೆ ಜೀವಕ್ಕೆ ಅಪಾಯ ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಸಲಾಗಿದೆ.

ಈ ಹಿನ್ನಲೆಯಲ್ಲಿ ಗಂಗೂಲಿ ಪೊಲೀಸ್ ದೂರು ದಾಖಲಿಸಿರುವುದಲ್ಲದೆ, ಕಾರ್ಯಕ್ರಮ ಸಂಘಟಕರಿಗೂ ವಿಷಯ ತಿಳಿಸಿದ್ದಾರೆ.  ಹೀಗಾಗಿ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಅವರಿನ್ನೂ ನಿರ್ಧರಿಸಿಲ್ಲವಂತೆ. ಬೆದರಿಕೆ ಪತ್ರ ಬರೆದವರು ಯಾರು ಮತ್ತು ಯಾಕಾಗಿ ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ