ವಿರಾಟ್ ಕೊಹ್ಲಿಗೆ ರೇಶ್ಮೆ ಸುತ್ತಿ ಹೊಡೆದ ಸೌರವ್ ಗಂಗೂಲಿ

ಮಂಗಳವಾರ, 11 ಜುಲೈ 2017 (08:54 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ನಾಯಕ ವಿರಾಟ್ ಕೊಹ್ಲಿ ರೇಶ್ಮೆ ಶಾಲು ಸುತ್ತಿ ಹೊಡೆಯುವ ಕೆಲಸ ಮಾಡಿದ್ದಾರೆ.


ಇತ್ತೀಚೆಗೆ ಮಾಜಿ ಕೋಚ್ ಅನಿಲ್ ಕುಂಬ್ಳೆಯೊಂದಿಗಿನ ವಿರಸವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಕೊಹ್ಲಿಗೆ ಟಾಂಗ್ ನೀಡಿದ್ದಾರೆ. ಒಬ್ಬ ಕೋಚ್ ಹೇಗೆ ಕಾರ್ಯ ನಿರ್ವಹಿಸುತ್ತಾನೆಂದು ಮೊದಲು ಕೊಹ್ಲಿ ತಿಳಿದುಕೊಳ್ಳಬೇಕು ಎಂದು ಅನಿಲ್ ಕುಂಬ್ಳೆಯ ಕಾರ್ಯನಿರ್ವಹಣೆಯನ್ನು ಪ್ರಶ್ನೆ ಮಾಡಿದ್ದ ಕೊಹ್ಲಿಗೆ ತಿರುಗೇಟು ನೀಡಿದ್ದಾರೆ.

ಹಾಗಿದ್ದರೂ, ಕೊಹ್ಲಿಯೂ ಒಬ್ಬ ಉತ್ತಮ ನಾಯಕನೇ. ಕೋಚ್ ಆಯ್ಕೆ ವಿಚಾರದಲ್ಲಿ ಅವರು ಇದುವರೆಗೆ ತಲೆ ಹಾಕಿಲ್ಲ. ಇನ್ನಷ್ಟೇ ಅವರ ಬಳಿ ಆ ವಿಷಯ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ.. ವಿರಾಟ್ ಕೊಹ್ಲಿ ಅಭಿಪ್ರಾಯದ ಬಳಿಕ ನೂತನ ಕೋಚ್ ಆಯ್ಕೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ