ಸಾವಿನ ನಂತರ ವ್ಯಕ್ತಿಯ ಅಸ್ಥಿಯನ್ನು ಗಂಗಾನದಿಯಲ್ಲಿ ವಿಸರ್ಜಿಸಿದರೆ ಆತನ ಆತ್ಮಕ್ಕೆ ಮುಕ್ಕಿ ಸಿಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಮ್ಮ ದೇಶದವರು ಪಾಶ್ಚಾತ್ಯ ಸಂಸ್ಕೃತಿ, ನಂಬಿಕೆಗೆ ಮಾರುಹೋದರೆ ಅಲ್ಲಿನವರು ನಮ್ಮ ಸನಾತನ ಧರ್ಮ, ಭಾರತದ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದುತ್ತಿದ್ದಾರೆ.ವಿದೇಶಿಗರು ಹಿಂದೂ ಧರ್ಮ ಸ್ವೀಕರಿಸುವುದು ಇತ್ತೀಚಿಗೆ ಹೆಚ್ಚುತ್ತಲೇ ಇದೆ. ಅದಕ್ಕೆ ಸಾಕ್ಷಿಯಾಗಿ ಮಂಗಳವಾರ ವಾರಣಾಸಿಯಲ್ಲಿ ಕಂಡು ಬಂದ ದೃಶ್ಯವೊಂದು ಎಲ್ಲರನ್ನು ಚಕಿತಗೊಳಿಸಿತು.