ಧೋನಿಯ ಹಣದ ಬೇಡಿಕೆಯಿಂದ ಕಂಗಾಲಾದ ನಿರ್ಮಾಪಕ

ಮಂಗಳವಾರ, 26 ಆಗಸ್ಟ್ 2014 (19:30 IST)
ಭಾರತೀಯ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಜೀವನ ಕುರಿತು ಮಾಡಬೇಕೆಂದಿರುವ ಸಿನೆಮಾದ ಪ್ರಕ್ರಿಯೆ ನಿಂತು ಹೋಗಿದೆ. ಇದಕ್ಕೆ ಕಾರಣ ಬೇರಾರು ಅಲ್ಲ ಸ್ವತಃ ಧೋನಿ ಆಗಿದ್ದಾರೆ. 
 
ವರ್ಷದ ಪ್ರಾರಂಭದಲ್ಲಿ ಬಂದ ಸುದ್ದಿಯ ಪ್ರಕಾರ, ಧೋನಿ ಈ ಸಿನೆಮಾಗಾಗಿ ಒಪ್ಪಿಗೆ ಸೂಚಿಸಿದ್ದರು. ಸಿನೆಮಾದ ನಿರ್ದೇಶನದ ಜವಾಬ್ದಾರಿ 'ಎ ವೆಡ್‌ನೆಸ್‌ ಡೆ  ಖ್ಯಾತಿಯ ನೀರಜ್‌ ಪಾಂಡೆಗೆ ಒಪ್ಪಿಸಲಾಗಿತ್ತು. ಧೋನಿ ಪಾತ್ರವನ್ನು ಮಾಡಲು ಸುಶಾಂತ್‌ ಸಿಂಗ್‌ ರಾಜಪುತ್‌‌ರನ್ನು ಆಯ್ಕೆ ಮಾಡಲಾಗಿತ್ತು. ಇಲ್ಲಿಯವರೆಗೆ ಸುಶಾಂತ್‌ ರಾಂಚಿಯಲ್ಲಿರುವ ಧೋನಿ ಮನೆಗೆ ಕೂಡ ಹೋಗಿ ವಿಷಯ ಸಂಗ್ರಹಣೆ ಕೂಡಾ ಮಾಡಿದ್ದರು. ಈ ಪ್ರಕ್ರಿಯೆಯಲ್ಲಿ ಮುಂಬೈನ ಹೋಟೆಲ್‌ ಒಂದರಲ್ಲಿ ಧೋನಿ ಮತ್ತು ಸುಶಾಂತ್‌‌ರ ಭೇಟಿ ಕೂಡ ಆಗಿತ್ತು. 
 
 ಬೈಚುಂಗ್‌‌ ಭುಟಿಯಾರ ಪ್ರಕಾರ, ಪರದೆಯ ಮೇಲೆ ಧೋನಿಯ ಪಾತ್ರ ರಣಬೀರ್‌ ಮಾಡಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ, ಸಿನೆಮಾ ಈಗ ವಿವಾದಲ್ಲಿ ಸಿಲುಕಿಕೊಂಡಿದೆ. ಹಣದ ಕಾರಣ ಸಿನೆಮಾ ನಿಂತು ಹೋಗಿದೆ ಎಂದು ಮೂಲಗಳು ತಿಳಿಸಿವೆ. 
 
ಖುದ್ದು ತನ್ನ ಮೇಲೆ ಸಿನೆಮಾ ಮಾಡುವುದಕ್ಕಾಗಿ ಧೋನಿ 45 ಕೋಟಿ ರೂಪಾಯಿ ಬೇಡಿಕೆಯನ್ನಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಣ್ಣ ಬಜೆಟ್‌‌‌‌‌ನ ಸಿನೆಮಾ ಮಾಡಲು ನೀರಜ್‌‌‌ ಪಾಂಡೆ ಮತ್ತು ಸಿನೆಮಾದ ನಿರ್ಮಾಪಕರು ಈಗ ಈ ಪ್ರೊಜೆಕ್ಟ್‌‌‌‌ ಬಗ್ಗೆ ಮತ್ತೊಮ್ಮೆ ವಿಚಾರ ಮಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ