ವರ್ಷದ ಪ್ರಾರಂಭದಲ್ಲಿ ಬಂದ ಸುದ್ದಿಯ ಪ್ರಕಾರ, ಧೋನಿ ಈ ಸಿನೆಮಾಗಾಗಿ ಒಪ್ಪಿಗೆ ಸೂಚಿಸಿದ್ದರು. ಸಿನೆಮಾದ ನಿರ್ದೇಶನದ ಜವಾಬ್ದಾರಿ 'ಎ ವೆಡ್ನೆಸ್ ಡೆ ಖ್ಯಾತಿಯ ನೀರಜ್ ಪಾಂಡೆಗೆ ಒಪ್ಪಿಸಲಾಗಿತ್ತು. ಧೋನಿ ಪಾತ್ರವನ್ನು ಮಾಡಲು ಸುಶಾಂತ್ ಸಿಂಗ್ ರಾಜಪುತ್ರನ್ನು ಆಯ್ಕೆ ಮಾಡಲಾಗಿತ್ತು. ಇಲ್ಲಿಯವರೆಗೆ ಸುಶಾಂತ್ ರಾಂಚಿಯಲ್ಲಿರುವ ಧೋನಿ ಮನೆಗೆ ಕೂಡ ಹೋಗಿ ವಿಷಯ ಸಂಗ್ರಹಣೆ ಕೂಡಾ ಮಾಡಿದ್ದರು. ಈ ಪ್ರಕ್ರಿಯೆಯಲ್ಲಿ ಮುಂಬೈನ ಹೋಟೆಲ್ ಒಂದರಲ್ಲಿ ಧೋನಿ ಮತ್ತು ಸುಶಾಂತ್ರ ಭೇಟಿ ಕೂಡ ಆಗಿತ್ತು.
ಬೈಚುಂಗ್ ಭುಟಿಯಾರ ಪ್ರಕಾರ, ಪರದೆಯ ಮೇಲೆ ಧೋನಿಯ ಪಾತ್ರ ರಣಬೀರ್ ಮಾಡಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ, ಸಿನೆಮಾ ಈಗ ವಿವಾದಲ್ಲಿ ಸಿಲುಕಿಕೊಂಡಿದೆ. ಹಣದ ಕಾರಣ ಸಿನೆಮಾ ನಿಂತು ಹೋಗಿದೆ ಎಂದು ಮೂಲಗಳು ತಿಳಿಸಿವೆ.