ನೆರೆಮನೆಯವರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೊಳಗಾದ ಟೀಂ ಇಂಡಿಯಾ ಕ್ರಿಕೆಟಿಗ!

ಸೋಮವಾರ, 16 ಡಿಸೆಂಬರ್ 2019 (09:29 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ಪ್ರವೀಣ್ ಕುಮಾರ್ ಮೇಲೆ ನೆರೆಮನೆಯಾತ ಮತ್ತು ಆತನ ಏಳು ವರ್ಷದ ಪುತ್ರನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.


ಮೀರತ್ ನ ದೀಪಕ್ ಶರ್ಮಾ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಿನ ಜಾವ ಬಸ್ ಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದಾಗ ಕಾರಿನಲ್ಲಿ ಬಂದ ಪ್ರವೀಣ್ ಕುಮಾರ್ ಮೊದಲು ಬಸ್ ಡ್ರೈವರ್ ಜತೆ ತಗಾದೆ ತೆಗೆದಿದ್ದರು. ಬಳಿಕ ತನ್ನ ಮೇಲೆ ಹಾಗೂ ಪುತ್ರನ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ಅವರು ಪಾನಮತ್ತ ಸ್ಥಿತಿಯಲ್ಲಿದ್ದರು ಎಂದು ದೂರುದಾರ ಹೇಳಿದ್ದಾರೆ.

ತನಿಖೆಯ ಬಳಿಕ ಇಬ್ಬರೂ ನೆರೆಹೊರೆಯವರೆಂದು ಗೊತ್ತಾಗಿದ್ದು, ಇಬ್ಬರ ಜತೆಗೂ ಮಾತುಕತೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆಯೂ ಒಮ್ಮೆ ಪ್ರವೀಣ್ ಮೇಲೆ ಇಂತಹದ್ದೇ ಹಲ್ಲೆ ಆರೋಪ ಕೇಳಿಬಂದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ