ಸ್ಪೂರ್ತಿದಾಯಕ ಕ್ಯಾಪ್ಟನ್ ಕೂಲ್ ಧೋನಿಗೆ ಟೀಂ ಇಂಡಿಯಾ ಸನ್ಮಾನ ಮಾಡಿದ ರೀತಿಯಿದು

ಶುಕ್ರವಾರ, 3 ಫೆಬ್ರವರಿ 2017 (09:44 IST)
ಬೆಂಗಳೂರು: ನಾಯಕತ್ವ ಬಿಟ್ಟ ಮೇಲೂ ಟೀಂ ಇಂಡಿಯಾ ಮೇಲೆ ಧೋನಿ ಪ್ರಭಾವ ಕಡಿಮೆಯಾಗಿಲ್ಲ. ಇಷ್ಟು ವರ್ಷಗಳ ಕಾಲ ಟೀಂ ಇಂಡಿಯಾವನ್ನು ಮುನ್ನಡೆಸಿದ ನಾಯಕನಿಗೆ ಸಹ ಆಟಗಾರರು ತಕ್ಕ ರೀತಿಯಲ್ಲಿ ಸನ್ಮಾನ ಮಾಡಿದ್ದಾರೆ.

 
ಬಹುಶಃ ಇಂತಹ ಒಂದು ಸನ್ಮಾನ ಯಾವ ನಾಯಕನಿಗೂ ಸಿಕ್ಕಿರಲಿಕ್ಕಿಲ್ಲ. ಬೆಂಗಳೂರು ಟಿ20 ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಆಟಗಾರರು, ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹಾಗೂ ಸಹಾಯಕ ಸಿಬ್ಬಂದಿಗಳು ಸೇರಿದಂತೆ ಧೋನಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಧೋನಿ ಗೆದ್ದ ಎರಡು ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಟ್ರೋಫಿಯ ಚಿತ್ರದ ಜತೆಗೆ ನಾಲ್ಕು ಸ್ಟಾರ್ ನೀಡಿದ ಫಲಕವನ್ನು ನೀಡಲಾಯಿತು. ಇದರಲ್ಲಿ ‘ನೀವೊಬ್ಬ ಸ್ಪೂರ್ತಿದಾಯಕ ನಾಯಕ. ಧನ್ಯವಾದಗಳು-ಟೀಂ ಇಂಡಿಯಾ’ ಎಂದು ಬರೆಯಲಾಗಿದೆ.

ಈ ಸಂದರ್ಭದಲ್ಲಿ ಕೋಚ್ ಅನಿಲ್ ಕುಂಬ್ಳೆ ಧೋನಿ ಗುಣಗಾನ ಮಾಡಿದರು. ಕೊನೆಗೆ ಆಟಗಾರರೆಲ್ಲಾ ಜತೆಯಾಗಿ ನಿಂತು ಧೋನಿ ಜತೆ ಫೋಟೋ ತೆಗೆಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ