ಮುಂಬೈ: ಟೀಂ ಇಂಡಿಯಾದಲ್ಲಿ ದಿನಕ್ಕೊಬ್ಬರು ಗಾಯಗೊಳ್ಳುತ್ತಿರುವುದು ಹೊಸದೇನಲ್ಲ. ಈ ಪಟ್ಟಿಗೆ ಇನ್ನಿಬ್ಬರು ಸೇರಿಕೊಂಡಿದ್ದಾರೆ. ಹೊಸ ಗಾಯಾಳುಗಳು ಅಜಿಂಕ್ಯ ರೆಹಾನೆ ಮತ್ತು ಮೊಹಮ್ಮದ್ ಶಮಿ.
ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಇಂದಿನಿಂದ ಆರಂಭವಾಗಿದೆ. ಇಂಗ್ಲೆಂಡ್ ತಂಡ ಟಾಸ್ ಗೆದ್ದುಕೊಂಡು ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ನಂತರ ವಿರಾಟ್ ಕೊಹ್ಲಿ ಮಾತನಾಡುವಾಗ ಈ ಇಬ್ಬರು ಆಟಗಾರರ ಗಾಯದ ಸಮಸ್ಯೆ ಹೇಳಿಕೊಂಡರು. ಹೀಗಾಗಿ ಇವರಿಬ್ಬರೂ ಇಂದು ತಂಡದಲ್ಲಿ ಆಡುತ್ತಿಲ್ಲ. ಶಮಿ ಬದಲಿಗೆ ಭುವನೇಶ್ವರ ಕುಮಾರ್ ಆಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಚೇತರಿಸಿಕೊಂಡಿದ್ದಾರೆ. ಅಜಿಂಕ್ಯ ಹೊರ ಹೋದ ಕಾರಣ ರಾಹುಲ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೊಹ್ಲಿಗೆ ಯಾವುದೇ ತಲೆನೋವಾಗಲಿಲ್ಲ.
ಈಗ ಭಾರತದ ಬ್ಯಾಟಿಂಗ್ ಸದೃಢವಾಗಿ ಕಾಣುತ್ತಿದೆ. ಚೇಸಿಂಗ್ ಮಾಡಲು ಇರುವ ಕಾರಣ ಬಲಿಷ್ಠ ಬ್ಯಾಟಿಂಗ್ ನ ಅಗತ್ಯ ತಂಡಕ್ಕಿತ್ತು. ಅದನ್ನು ಬ್ಯಾಟ್ಸ್ ಮನ್ ಗಳು ಉಳಿಸಿಕೊಳ್ಳಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ