ಸೋಲಿನ ಅವಮಾನ ತಾಳಲಾರದೆ ವಿರಾಟ್ ಕೊಹ್ಲಿ ಬಳಗ ಮಾಡಿದ್ದೇನು?

ಸೋಮವಾರ, 27 ಫೆಬ್ರವರಿ 2017 (17:16 IST)
ಪುಣೆ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾಕ್ಕೆ ಎಲ್ಲರೂ ಟೀಕೆಗಳ ಸುರಿಮಳೆ ಸುರಿಸುವರೇ. ಈ ಅವಮಾನ ಮರೆಯಲು ಕೊಹ್ಲಿ ಬಳಗ ಬೇರೊಂದು ದಾರಿ ಕಂಡುಕೊಂಡಿತು.


ಪುಣೆಯ ಸಮೀಪವಿರುವ ತಮ್ಹಿಣಿ ಘಾಟಿಗೆ ಕೊಹ್ಲಿ ಬಳಗ ಏರಿದೆ. ಕೊಹ್ಲಿ ಜತೆಗೆ, ಅಜಿಂಕ್ಯಾ ರೆಹಾನೆ ಕುಟುಂಬ, ರವೀಂದ್ರ ಜಡೇಜಾ, ಅಭಿನವ್ ಮುಕುಂದ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.

ಬೆಟ್ಟದ ತಪ್ಪಲಲ್ಲಿ ಕುಳಿತ ಫೋಟೋಗಳು ಈಗ ಈ ಕ್ರಿಕೆಟಿಗರ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ರಾರಾಜಿಸುತ್ತಿದೆ. ಬೆಂಗಳೂರು ಟೆಸ್ಟ್ ಪಂದ್ಯ ಭಾನುವಾರ ಆರಂಭವಾಗಲಿರುವುದರಿಂದ ಅದಕ್ಕಿಂತಲೂ ಮೊದಲು ಸೋಲು ಮರೆಯುವ ಪ್ರಯತ್ನ ಇದಾಗಿರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ