ಅಜಿತ್ ಅಗರ್ಕರ್ ಮರ್ಯಾದೆ ಕಳೆದ ವೀರೇಂದ್ರ ಸೆಹ್ವಾಗ್!

ಸೋಮವಾರ, 5 ಡಿಸೆಂಬರ್ 2016 (09:04 IST)
ನವದೆಹಲಿ: ಭಾನುವಾರ ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಜನುಮ ದಿನ. ಯಾವುದೇ ಕ್ರಿಕೆಟಿಗರ ಜನುಮ ದಿನವಾದರೂ, ವೀರೇಂದ್ರ ಸೆಹ್ವಾಗ್ ವಿಶಿಷ್ಟವಾಗಿ ಶುಭ ಹಾರೈಸುತ್ತಾರೆ. ಆದರೆ ಸಾಧಾರಣವಾಗಿ ಎಲ್ಲರೂ ಜನುಮ ದಿನದಂದು ಅವರ ಸಾಧನೆಗಳನ್ನು ಮಾತ್ರ ಉಲ್ಲೇಖಿಸಿ ಹೊಗಳುತ್ತಾರೆ. ಆದರೆ ಸೆಹ್ವಾಗ್ ಮಾತ್ರ ಅಗರ್ಕರ್ ಮರ್ಯಾದೆ ಕಳೆದಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಅಗರ್ಕರ್ ಗೆ ಶುಭ ಹಾರೈಸಿದ ವೀರೂ, ಮೊದಲಿಗೆ ಅವರ ದಾಖಲೆಗಳನ್ನು ಹೇಳಿದರೆ, ಕೊನೆಯಲ್ಲಿ ಅವರ ಕೆಟ್ಟ ದಾಖಲೆಯನ್ನು ಉಲ್ಲೇಖಿಸಿ ಅವರಿಗೆ ಮುಜುಗರ ಉಂಟು ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಸತತ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದ ಅಗರ್ಕರ್ ಅಗ್ಗಳಿಕೆಯನ್ನು ಉಲ್ಲೇಖಿಸಿ ಜನುಮ ದಿನದ ಶುಭಾಷಯಗಳು ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ