ಪ್ಲೇಟು ಬದಲಾಯಿಸಿದ ವೀರೇಂದ್ರ ಸೆಹ್ವಾಗ್!

ಬುಧವಾರ, 1 ಮಾರ್ಚ್ 2017 (10:26 IST)
ನವದೆಹಲಿ: ನವದೆಹಲಿಯ ರಾಂಜಾಸ್ ಕಾಲೇಜಿನ ವಿದ್ಯಾರ್ಥಿನಿ ಎಬಿವಿಪಿ ವಿರುದ್ಧ ಪ್ರತಿಭಟನೆ ನಡೆಸಿದ ಟ್ವೀಟ್ ಪ್ರಕರಣದಲ್ಲಿ ಗುರ್ಮೆಹರ್ ಪ್ರಕರಣದಲ್ಲಿ  ಸಿಲುಕಿಕೊಂಡ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ವಿವಾದವಾಗುತ್ತಿದ್ದಂತೆ ಉಲ್ಟಾಹೊಡೆದಿದ್ದಾರೆ.


ಗುರ್ಮೆಹರ್ ತನ್ನಪ್ಪನನ್ನು ಕೊಂದಿದ್ದು ಪಾಕಿಸ್ತಾನವಲ್ಲ ಯುದ್ಧ ಎಂದು ಬಿತ್ತಿಫಲಕ ಹಿಡಿದು ಟ್ವೀಟ್ ಮಾಡಿದ್ದಕ್ಕೆ ಪ್ರತಿಯಾಗಿ ಸೆಹ್ವಾಗ್ ನನ್ನ ಎರಡು ತ್ರಿಶತಕಗಳನ್ನು ಬ್ಯಾಟ್ ಮಾಡಿತ್ತು. ನಾನಲ್ಲ. ಬ್ಯಾಟ್ ನಲ್ಲಿ ಧಮ್ ಇದೆ ಎಂದು ತಿರುಗೇಟು ನೀಡಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಮೌನ ಮುರಿದಿರುವ ಸೆಹ್ವಾಗ್, ನನ್ನ ಟ್ವೀಟ್ ಗುರ್ಮೆಹರ್ ರನ್ನು ಗುರಿಯಾಗಿಸಿದ್ದಲ್ಲ ಎಂದು ಉತ್ತರಿಸಿದ್ದಾರೆ. ಇದೊಂದು ತಮಾಷೆಯಾಗಿತ್ತು, ಜನರು ಇದನ್ನು ತಪ್ಪಾಗಿ ಭಾವಿಸಿದರು ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ