ಕಾವೇರಿ ನೀರಿನ ಬಗ್ಗೆ ರವಿಚಂದ್ರನ್ ಅಶ್ವಿನ್ ಹೇಳಿದ್ದೇನು?

ಗುರುವಾರ, 9 ಮಾರ್ಚ್ 2017 (12:03 IST)
ಬೆಂಗಳೂರು: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಆರ್. ಅಶ್ವಿನ್ ತಮ್ಮ ಮಾತಿನಿಂದಲೇ ಎಲ್ಲರ ಗಮನ ಸೆಳೆದರು. ಅವರು ಹಾಗೆ ಮಾತನಾಡುವುದಕ್ಕೆ ಕಾರಣ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಕೇಳಿದ ತಮಾಷೆಯ ಪ್ರಶ್ನೆ.

 
ಫಾರುಖ್ ಕೇಳಿದ್ದೇನು ಗೊತ್ತೇ? “ಇ. ಪ್ರಸನ್ನ, ಬಿಎಸ್ ಚಂದ್ರಶೇಖರ್ ಅವರಂತಹ ಗ್ರೇಟ್ ಕ್ರಿಕೆಟರ್ ಗಳನ್ನು ಕೊಡುಗೆಯಾಗಿ ನೀಡಿದ ಕರ್ನಾಟಕದ ನೀರಿನಲ್ಲಿ ಅಂತಹ ಸ್ಪೆಷಾಲಿಟಿ ಏನಾದರೂ ಇದೆಯೇ?” ಎಂದು ಕಾಲೆಳೆಯಲು ಪ್ರಯತ್ನಿಸಿದರು.

ಅದಕ್ಕೆ ಅಶ್ವಿನ್ ಕೂಡಾ ಅಷ್ಟೇ ಚೆನ್ನಾಗಿ ಉತ್ತರಿಸಿದರು. “ದಯವಿಟ್ಟು ರಾಜಕೀಯ ಇಲ್ಲಿಗೆ ಎಳೆದು ತರಬೇಡಿ. ಬಹುಶಃ ಇತ್ತೀಚೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿದು ಬಂದಿತ್ತಲ್ಲ. ಅದಕ್ಕೇ  ಈ ಮ್ಯಾಜಿಕ್ ಆಗುತ್ತಿರಬೇಕು” ಎಂದು ಅಶ್ವಿನ್ ತಮಾಷೆಯಾಗಿ ಉತ್ತರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ