ಪಣಜಿ: ಮದುವೆ ಎಂದರೆ ನಗು ನಗುತ್ತಾ ಇರಬೇಕು. ಯುವರಾಜ್ ಸಿಂಗ್ ಕೂಡಾ ತಮ್ಮ ಮದುವೆಯಲ್ಲಿ ಹಾಗೇ ಇದ್ದರು. ಆದರೆ ಒಂದು ಹಂತದಲ್ಲಿ ಕಣ್ಣೀರು ಹಾಕಿದರು. ಯಾಕೆ ಗೊತ್ತಾ?
ಮದುವೆ ಕಾರ್ಯಕ್ರಮ ಮುಗಿದ ಮೇಲೆ ವೇದಿಕೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ಕಾರ್ಯಕ್ರಮವಿತ್ತು. ಆಗ ತನ್ನ ವೇದಿಕೆಗೆ ಬಂದ ಯುವರಾಜ್ ಸಿಂಗ್ ತಮ್ಮ ಅಮ್ಮನ ಬಗ್ಗೆ ಹೇಳುತ್ತಾ ಕಣ್ಣೀರು ಮಿಡಿದರು. ತನಗೆ ಕಷ್ಟ ಬಂದಾಗ, ಸುಖ ಬಂದಾಗ ತನ್ನ ಜತೆ ಬಂಡೆ ಕಲ್ಲಿನಂತೆ ಆಸರೆಯಾಗಿ ನಿಂತ ಅಮ್ಮ ಶಬನಮ್ ಬಗ್ಗೆ ಹೊಗಳುತ್ತಾ ಯುವಿಗೆ ಕಣ್ಣಲ್ಲಿ ನೀರೇ ಬಂತು.
ಬಂದ ಅತಿಥಿಗಳ ಮುಂದೆ ಯುವಿ ದುಃಖ ತಡೆಯಲಾರದೆ ಅಳುವಾಗ ಅಲ್ಲಿದ್ದವರಿಗೂ ಕಣ್ಣಲ್ಲಿ ನೀರು ಬಂತಂತೆ. ಗೋವಾದಲ್ಲಿ ನಡೆದ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಗೂ ಯುವಿ ತಂದೆ ಯೋಗರಾಜ್ ಬಂದಿರಲಿಲ್ಲ. ತಾಯಿ ಶಬನಮ್ ಎಲ್ಲಾ ಉಸ್ತುವಾರಿ ನೋಡಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ