ನನ್ನ ಮಗನಿಗೆ ಕೆಟ್ಟದು ಮಾಡಿದ ಧೋನಿಯನ್ನು ಕ್ಷಮಿಸಿದ್ದೇನೆ ಎಂದ ಯುವರಾಜ್ ಸಿಂಗ್ ತಂದೆ

ಶುಕ್ರವಾರ, 20 ಜನವರಿ 2017 (17:12 IST)
ನವದೆಹಲಿ: ಕೊನೆಗೂ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿಗೆ ಕ್ಷಮಾದಾನ ನೀಡಿದ್ದಾರೆ!  ಇದುವರೆಗೆ ಯುವರಾಜ್ ರಾಷ್ಟ್ರೀಯ ತಂಡಕ್ಕೆ ಮರಳದಿರಲು ಧೋನಿಯೇ ಕಾರಣ ಎಂದು ಅವಕಾಶ ಸಿಕ್ಕಾಗಲೆಲ್ಲಾ ಜರಿಯುತ್ತಿದ್ದ ಯೋಗರಾಜ್ ಇದೀಗ ಪುತ್ರನ ಶತಕ ನೋಡಿ ಧೋನಿಯನ್ನು ಕ್ಷಮಿಸಿದ್ದಾರೆ.
 

“ದೇವರು ಧೋನಿಗೆ ಒಳ್ಳೆಯದನ್ನು ಮಾಡಲಿ. ಆತ ಇಂದು ಶತಕ ಬಾರಿಸಬೇಕೆಂದು ನಾನು ಬಯಸಿದ್ದೆ. ಆತ ಮಾಡಿದ ಕೆಡುಕಿಗೆ ದೇವರೇ ಆತನನ್ನು ನೋಡಿಕೊಳ್ಳಲಿ.  ದೇವರು ಆತನನ್ನು ಕ್ಷಮಿಸಿಲಿ” ಎಂದು ಯೋಗರಾಜ್ ಹೇಳಿಕೊಂಡಿದ್ದಾರೆ.

“ನಾನು ಯಾವತ್ತೂ ನನಗೆ ಮತ್ತು ನನ್ನ ಮಕ್ಕಳಿಗೆ ಕೆಡುಕು ಮಾಡಿದವರಿಗೆ ಒಳ್ಳೆಯದು ಮಾಡಲಿ ಎಂದೇ ದೇವರಲ್ಲಿ ಕೇಳಿಕೊಂಡಿದ್ದೇನೆ. ಧೋನಿ ಯುವರಾಜ್ ನ ಮೂರು ವರ್ಷದ ವೃತ್ತಿ ಜೀವನ ಹಾಳು ಮಾಡಿದ. ಆದರೂ ಪರವಾಗಿಲ್ಲ. ಆತನಿಗೆ ಒಳ್ಳೆಯದಾಗಲಿ” ಎಂದು ಯೋಗರಾಜ್ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ