ಬುಧವಾರ ಝಾನ್ಸಿಯ ಹಿರಿಯ ಪೊಲೀಸ್ ಅಧೀಕ್ಷಕರಾದ ಕಿರಣ್.ಎಸ್ ಅವರನ್ನು ಭೇಟಿಯಾದ ಮಗುವಿನ ತಾಯಿ ಸುಮನ್, ತನ್ನ ಮಗನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಮೇ 6 ರಂದು ತನ್ನ ಮಗ ಪ್ರದೀಪ್ ಮನೆಯ ಹೊರಗಡೆ ಆಟವಾಡುತ್ತಿದ್ದಾಗ ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರು ಆತನನ್ನು ಅಪಹರಿಸಿದ್ದರು ಎಂದು ತಿಳಿಸಿದ್ದ ಆಕೆ ಇದರ ಹಿಂದೆ ತಮ್ಮ ಸಂಬಂಧಿಕರ ಕೈವಾಡವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಳು.