ಬಿಹಾರದ ಗ್ರಾಮವೊಂದರಲ್ಲಿ ಆಯೋಜಿತವಾಗಿದ್ದ ಮದುವೆಯೊಂದು ಕ್ಷುಲ್ಲಕ ಕಾರಣಕ್ಕೆ ಮುರಿದು ಹೋಯಿತು. ವರ ಮಾನಸಿಕ ಅಸ್ವಸ್ಥನೆಂದು ತೀರ್ಮಾನಿಸಿದ ವಧು, ಆತನ ಜತೆ ಮದುವೆಯಾಗಲು ನಿರಾಕರಿಸಿದಳು. ಇಷ್ಟಕ್ಕೂ ವರ ಮಾಡಿದ ತಪ್ಪೇನು ಗೊತ್ತೇ? ತಟ್ಟೆ ತುಂಬ ಇದ್ದ ಗುಲಾಬ್ ಜಾಮೂನ್ ಮಧ್ಯದಲ್ಲಿ ಇಟ್ಟಿದ್ದ ಹಿಟ್ಟಿನಿಂದ ಮಾಡಿದ್ದ 'ರಸಗುಲ್ಲಾ' ತಿಂದಿದ್ದು. ಹೌದು ಇದು ವಾಸ್ತವವಾಗಿ ನಡೆದ ಘಟನೆ.
ಎರಡು ಕಡೆಯವರು ಆಗಮಿಸಿ ದ್ವಾರಪೂಜೆ ಮತ್ತು ಮದುವೆಯ ಇತರ ಸಂಪ್ರದಾಯಗಳನ್ನು ನಡೆಸಿ ಆಗಿತ್ತು. ಅಷ್ಟರಲ್ಲಿ ವಧುವಿನ ಸ್ನೇಹಿತೆಯರು ವರ ಮನೋಜ್ ಕುಮಾರ್ಗೆ ತಟ್ಟೆ ತುಂಬ ಕಾಲಾ ಜಾಮ್ ಎಂಬ ಸಿಹಿ ಪದಾರ್ಥವನ್ನು ನೀಡಿದರು. ತಟ್ಟೆಯ ಮಧ್ಯದಲ್ಲಿ ರಸಗುಲ್ಲಾದಂತೆ ಕಾಣುವ ಹಿಟ್ಟಿನಿಂದ ಮಾಡಿದ ತಿಂಡಿಯನ್ನು ಇಡಲಾಗಿತ್ತು. ವರ ಮಹಾಶಯ ಆ ರಸಗುಲ್ಲಾವನ್ನು ಎತ್ತಿಕೊಂಡು ತಿಂದಿದ್ದಾನೆ. ಆತ ರಸಗುಲ್ಲಾವನ್ನು ತಿಂದಿದ್ದು ವಧುವಿಗೆ ಅಸಹ್ಯವೆನಿಸಿದೆ. ಆತ ಮಾನಸಿಕ ಅಸ್ವಸ್ಥನೆಂದು ವಾದಿಸಿದ ಅವಳು ಮದುವೆಯನ್ನು ನಿರಾಕರಿಸಿದ್ದಾಳೆ.