ಈ ಚರ್ಚೆಗೆ ಮೂಲ ಕಾರಣ ಇತ್ತೀಚೆಗೆ ಪತ್ರಿಕೆಯೊಂದು ತಮಿಳು ಸಿನಿಮಾ ನಿರ್ದೇಶಕ ರಾಧಕೃಷ್ಣನ್ ಪರ್ತಿಬನ್ ಅವರ ಸಂದರ್ಶನ ನಡೆಸಿತ್ತು. ‘ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ ಕೈಯಲ್ಲಿ ಹಣ ಇರುತ್ತಿರಲಿಲ್ಲ, ಹಾಗಾಗಿ ನಿತ್ಯವು ಉಪ್ಪಿಟ್ಟು ತಿಂದು ಜೀವನ ಸಾಗಿಸಬೇಕಾಗಿತ್ತು. ಇಂದು ಕೂಡ ಸಾಕಷ್ಟು ಜನ ಸಹ ನಿರ್ದೇಶಕರು ಉಪ್ಪಿಟ್ಟಿನ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಣೆ ಮಾಡಬೇಕು ಎಂದು ತಮಾಷೆ ಮಾಡಿದ್ದಾರೆ. ಅಂದಿನಿಂದ ಶುರುವಾಯಿತು ನೋಡಿ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕು ಎಂದು.. ಈಗ ಉಪ್ಮಾ ಎಂದರೆ ಉಪ್ಪಿಟ್ಟು ಎಂಬ ಅಭಿಯಾನವೇ ಆರಂಭವಾಗಿದೆ ಕಣ್ರಿ.