Ramalinga Reddy: ಬಿಜೆಪಿಯವರ ಮೇಲೆ ಯಾಕೆ ಐಟಿ, ಇಡಿ ದಾಳಿ ಆಗಲ್ಲ: ರಾಮಲಿಂಗಾ ರೆಡ್ಡಿ

Krishnaveni K

ಗುರುವಾರ, 12 ಜೂನ್ 2025 (14:29 IST)
ಬೆಂಗಳೂರು: ಬಳ್ಳಾರಿಯಲ್ಲಿ ಸಂಸದ ಇ ತುಕರಾಂ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ನಡೆದ ಇಡಿ ದಾಳಿಗೆ ಸಂಬಂಧಪಟ್ಟಂತೆ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
 

ಐಟಿ, ಇಡಿ ದಾಳಿಗಳೆಲ್ಲವೂ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ನಡೆಯುತ್ತದೆ. ಬಿಜೆಪಿಯ ಯಾವ ನಾಯಕರೂ ಭ್ರಷ್ಟಾಚಾರ ಮಾಡಿಲ್ವೇ? ಯಾಕೆ ಅವರ ಮೇಲೆ ದಾಳಿ ನಡೆಯಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

‘11 ವರ್ಷದಿಂದ ಬಿಜೆಪಿ ಸರ್ಕಾರ ಏನು ಮಾಡ್ತಾ ಇದೆ? ವಿಪಕ್ಷಗಳು ಅದರಲ್ಲಿ ಕಾಂಗ್ರೆಸ್ ನಲ್ಲಿರುವವರ ಮೇಲೆ ಇಡಿ ದಾಳಿ ಮಾಡ್ತಾನೆ ಇದೆ, ಮಾಡ್ಲಿ. ಆದರೆ 4 ವರ್ಷಗಳಲ್ಲಿ ಬಿಜೆಪಿ ಅವಧಿಯಲ್ಲಿ ಎಷ್ಟು ಹಗರಣಗಳಾಗಿತ್ತು? ಯಾಕೆ ಒಬ್ಬರ ಮೇಲೂ ದಾಳಿ ಮಾಡಿಲ್ಲ ಅವರು? ನಾಲ್ಕು ವರ್ಷಗಳಲ್ಲಿ ಅನೇಕ ಹಗರಣಗಳಾಗಿತ್ತು. ಅವರ ಮೇಲೆ ಮಾತ್ರ ಇಡಿ ದಾಳಿ ಆಗಲ್ಲ, ಐಟಿ ದಾಳಿ ಆಗಲ್ಲ. ವಿಪಕ್ಷಗಳ ನಾಯಕರ ಮೇಲೆ ದಾಳಿ ಮಾಡ್ತಾನೇ ಇರ್ತಾರೆ’ ಎಂದು ಸಚಿವರ ಹೇಳಿದ್ದಾರೆ.

ತುಕರಾಂ ಮತ್ತು ನಾಗೇಂದ್ರ ಸೇರಿದಂತೆ ಬಳ್ಳಾರಿ ಕಾಂಗ್ರೆಸ್ ನಾಯಕರ ಮೇಲೆ ವಾಲ್ಮೀಕಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸುತ್ತಿದ್ದಂತೇ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೆಲ್ಲವೂ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಯತ್ನ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ