ಭಾರತವನ್ನು ದಿವಾಳಿ ಮಾಡುವ ಎಲ್ಲಾ ಯೋಜನೆಗಳೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ: ಅರುಣ್ ಜೇಟ್ಲಿ

ಸೋಮವಾರ, 8 ಏಪ್ರಿಲ್ 2019 (09:44 IST)
ನವದೆಹಲಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಆದರೆ ಇದರಲ್ಲಿ ನೀಡಿರುವ ಭರವಸೆಗಳ ಪಟ್ಟಿ ನೋಡಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.


ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಅನುಷ್ಠಾನಕ್ಕೆ ತರಲಾಗದಂತಹ ಮತ್ತು ಅಪಾಯಕಾರಿ ಸುಳ್ಳು ಭರವಸೆಗಳನ್ನು ನೀಡಿದೆ. ಇದನ್ನು ಜಾರಿಗೆ  ತಂದರೆ ಭಾರತ ದಿವಾಳಿಯಾಗುವುದು ಖಚಿತ ಎಂದು ಜೇಟ್ಲಿ ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ್ರೋಹ ಅಪರಾಧವಲ್ಲ ಎಂಬ ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿಕೊಂಡಿದೆ. ಇದು ಅದರ ಮಾವೋವಾದಿ ಮತ್ತು ಜಿಹಾದಿ ಮಿತ್ರರ ಪ್ರೇರಣೆಯಿಂದ ಮಾಡಿರುವ ಘೋಷಣೆ. ಇದು ಅಪಾಯಕಾರಿ. ಇಂತಹ ಪಕ್ಷಕ್ಕೆ ಒಂದೇ ಒಂದು ಮತ ಸಿಗಬಾರದು ಎಂದು ಜೇಟ್ಲಿ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ