ಸ್ವಲ್ಪವಾದರೂ ಮರ್ಯಾದೆ ಉಳಿಸಿಕೊಳ್ಳಿ! ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಾಕೀತು

ಭಾನುವಾರ, 7 ಏಪ್ರಿಲ್ 2019 (05:25 IST)
ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರನ್ನು ಪ್ರಧಾನಿ ಮೋದಿ ಮೂಲೆಗುಂಪು ಮಾಡಿ ಗುರು-ಶಿಷ್ಯ ಪರಂಪರೆಗೇ ಅವಮಾನ ಮಾಡಿದರು ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ.


ಹಿಂದೂ ಧರ್ಮದ ಪ್ರಕಾರ ಗುರು-ಶಿಷ್ಯ ಪರಂಪರೆ ಶ್ರೇಷ್ಠವಾದುದು. ಆದರೆ ಪ್ರಧಾನಿ ಮೋದಿ ತಮ್ಮ ಗುರುಗಳಾದ ಅಡ್ವಾಣಿಯವರನ್ನೇ ಹೊರ ಹಾಕಿದ್ದಾರೆ ಎಂದು ಅಡ್ವಾಣಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡದ ವಿಚಾರ ಕೆದಕಿ ರಾಹುಲ್ ಲೇವಡಿ ಮಾಡಿದ್ದರು.

ರಾಹುಲ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಷ್ಮಾ ‘ರಾಹುಲ್ ಜೀ.. ಅಡ್ವಾಣಿ ಬಗ್ಗೆ ಮಾತನಾಡಿ ನಮಗೆ ತೀವ್ರ ನೋವು ಮಾಡಿದ್ದೀರಿ. ನಿಮ್ಮ ಸ್ಥಾನಕ್ಕೆ ತಕ್ಕ ಹಾಗೆ ಸ್ವಲ್ಪವಾದರೂ ಮರ್ಯಾದೆ ಉಳಿಸಿಕೊಳ್ಳಿ’ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ