ಸುಡುಬಿಸಿನಲ್ಲಿ ಪ್ರಚಾರ ಮಾಡುವ ತಲೆನೋವು ತಪ್ಪಿಸಲು ಮಮತಾ ಬ್ಯಾನರ್ಜಿ ಅಳಿಯ ಮಾಡಿದ ಉಪಾಯವೇನು ಗೊತ್ತಾ?!

ಭಾನುವಾರ, 28 ಏಪ್ರಿಲ್ 2019 (09:14 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಈ ಬಾರಿ ಟಿಎಂಸಿಯಿಂದ ಲೋಕಸಭಾ ಚುನಾವಣೆ ಸ್ಪರ್ಧೆಗಿಳಿದಿದ್ದಾರೆ.


ಹೇಳಿ ಕೇಳಿ ಈಗ ದೇಶದಾದ್ಯಂತ ಬಿಸಿಲಿನ ಝಳ ಹೇಳಿ ತೀರದು. ಈ ಸುಡು ಬಿಸಿಲಿನಲ್ಲಿ ಪ್ರಚಾರ ನಡೆಸುವುದೇ ಸವಾಲು. ಹೀಗಾಗಿ ಅಭಿಷೇಕ್ ಈ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಹೊಸ ಉಪಾಯ ಕಂಡುಕೊಂಡಿದ್ದು, ಇದನ್ನು ನೋಡಿ ಟ್ವಿಟರಿಗರು ನಗುತ್ತಿದ್ದಾರೆ.

ಅಭಿಷೇಕ್ ತೆರೆದ ಜೀಪಿನಲ್ಲಿ ತಮ್ಮದೇ ಪ್ರತಿಮೆಯೊಂದನ್ನು ಕಳುಹಿಸಿಕೊಡುತ್ತಿದ್ದಾರೆ. ಪ್ರತಿಮೆಗೆ ಹಾರ ಹಾಕಿಸಿ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರಕ್ಕೇ ಈ ಪರಿ ಆದರೆ ಇನ್ನು, ಚುನಾವಣೆ ಗೆದ್ದ ಬಳಿಕ ಈ ವ್ಯಕ್ತಿ ಜನರ ಕೈಗೆ ಸಿಗಬಹುದಾ ಎಂಬುದೇ ಸಾರ್ವಜನಿಕರ ಡೌಟು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ