ಕಿಸಾನ್ ಸಮ್ಮಾನ್ ಯೋಜನೆ ಪುಟಗೋಸಿ ಎಂದ ಸಂಸದ

ಶನಿವಾರ, 30 ಮಾರ್ಚ್ 2019 (09:30 IST)
ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡಲಾಗುತ್ತಿದ್ದ 6 ಸಾವಿರ ರೂ ಪುಟಗೋಸಿಗೆ ಹೋಲಿಸುವುದರ ಮೂಲಕ ಸಂಸದ ವೀರಪ್ಪ ಮೊಯ್ಲಿ ಟೀಕೆ ಮಾಡಿದ್ದಾರೆ.

ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ಯುಪಿಎ ಆಡಳಿತವಾಧಿಯಲ್ಲಿದ್ದ ನರೇಗಾ ಯೋಜನೆಯನ್ನ ಜಾರಿ ಮಾಡಿದ್ದೆವು. ಪ್ರತಿಯೊಬ್ಬ ಕೂಲಿಯಾಳುವಿಗೆ ಒಂದು ದಿನಕ್ಕೆ 212 ರೂ. ನೀಡುತ್ತಿದ್ದೇವು. ಒಂದು ಕುಟುಂಬದಲ್ಲಿ 5 ಮಂದಿ ಇದ್ದರೆ 1,500 ರೂ. ಹಣ ಸಿಗುತಿತ್ತು. ಆದರೆ ದೇಶದ ಪ್ರಧಾನಿ ಮೋದಿ ಮೊನ್ನೆ ಜಾರಿ ಮಾಡಿದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪುಟಗೋಸಿ 6 ಸಾವಿರ ರೂ. ಹಣ ಕೊಡುತ್ತಾರಂತೆ. ಅದು ಆರು ಕಂತಿನಲ್ಲಿ ಹಾಕುತ್ತಾರಂತೆ  ಎಂದು ವ್ಯಂಗ್ಯವಾಡಿದ್ದಾರೆ.

 

ಅಲ್ಲದೇ ಮೋದಿ ದುರ್ಬಲ ಪ್ರಧಾನಿಯಾಗಿದ್ದು, ದೇಶದ ಬಗ್ಗೆ ಪಾಕಿಸ್ತಾನದವರಿಗೆ ಭಯ ಹೋಗಿ ಬಿಟ್ಟಿದೆ. ಸರ್ಜಿಕಲ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರಗಾಮಿಗಳು ಸತ್ತಿದ್ದಾರೆಂದು ಲೆಕ್ಕ ಕೊಡಲಿಕ್ಕೆ ಆಗುತ್ತಿಲ್ಲ. ಆದರೆ ಸುಮ್ಮನೆ ಬಡಾಯಿ ಕೊಚ್ಚಿಕೊಳುತ್ತಾರೆ ಎಂದು ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ