ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್.ಐ.ಐ.) ನೇತೃತ್ವದ ದೇಶವ್ಯಾಪಿ ಸಾರ್ವಜನಿಕ ಆರೋಗ್ಯದ ಉಪಕ್ರಮದ ಭಾಗವಾಗಿ ಇಂದು ಬೆಂಗಳೂರಿನಲ್ಲಿ “ಕಾಂಕ್ವರ್ ಎಚ್.ಪಿ.ವಿ. ಅಂಡ್ ಕ್ಯಾನ್ಸರ್ ಕಾನ್ ಕ್ಲೇವ್ 2025” (ಎಚ್.ಪಿ.ವಿ. ಮತ್ತು ಕ್ಯಾನ್ಸರ್ ಗೆಲ್ಲಿರಿ ಶೃಂಗ 2025”) ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ಭಾರತವು ಎಚ್.ಪಿ.ವಿ. ಸಂಬಂಧಿತ ರೋಗಗಳು ಮುಖ್ಯವಾಗಿ ಗರ್ಭಗೊರಳಿನ ಕ್ಯಾನ್ಸರ್ ಗಳಿಂದ ಅಪಾರ ಸಂಕಷ್ಟ ಅನುಭವಿಸುತ್ತಿದ್ದು ಇದು ದೇಶದಲ್ಲಿ ಮಹಿಳೆಯರಲ್ಲಿ ದ್ವಿತೀಯ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿ ಉಳಿದಿದೆ. ಎಚ್.ಪಿ.ವಿ ಮತ್ತು ಕ್ಯಾನ್ಸರ್ ಕುರಿತು ಐಸಿಒ/ಐ.ಆರ್.ಎ.ಸಿ. ಇನ್ಫರ್ಮೇಷನ್ ಸೆಂಟರ್ (2023)ಪ್ರಕಾರ ಭಾರತದಲ್ಲಿ 1.23 ಲಕ್ಷ ಹೊಸ ಗರ್ಭಗೊರಳಿನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಮತ್ತು ವಾರ್ಷಿಕ 77,000ಕ್ಕೂ ಹೆಚ್ಚು ಸಂಬಂಧಿತ ಮರಣಗಳು ಸಂಭವಿಸುತ್ತಿವೆ. ಇದಲ್ಲದೆ ಶೇ.90 ಗುದ ಕ್ಯಾನ್ಸರ್ ಗಳು ಮತ್ತು ಶೇ.63ರಷ್ಟು ಶಿಶ್ನದ ಕ್ಯಾನ್ಸರ್ ಗಳು ಎಚ್.ಪಿ.ವಿ.ಗೆ ಸಂಬಂಧಿಸಿವೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಎಚ್.ಪಿ.ವಿ.ಯ ಸಾರ್ವಜನಿಕ ಆರೋಗ್ಯದ ಪರಿಣಾಮಗಳ ಕುರಿತು ಆಳವಾದ ಚರ್ಚೆಯಲ್ಲಿ ಪರಿಣಿತ ವೈದ್ಯರ ತಂಡವು ತೊಡಗಿಕೊಂಡಿತು. ಈ ತಂಡದಲ್ಲಿ:
•ಡಾ.ಚಿದಾನಂದ ಎನ್.ಕೆ.- ಚಿಗುರು ಚೈಲ್ಡ್ ಕೇರ್ ಸೆಂಟರ್ ನಲ್ಲಿ ಸೀನಿಯರ್ ಕನ್ಸಲ್ಟೆಂಟ್ ಪೀಡಿಯಾಟ್ರಿಷಿಯನ್ ಮತ್ತು ಅಲರ್ಜಿಸ್ಟ್, ಜೆ.ಪಿ.ನಗರ, ಬೆಂಗಳೂರು. ವಿ.ಪಿ.- ಬೆಂಗಳೂರು ಡಿವಿಷನ್, ಐ.ಎ.ಪಿ. ಕೆ.ಎಸ್.ಬಿ. 2025. ಕಾರ್ಯದರ್ಶಿ- ಐ.ಎ.ಪಿ. ಬೆಂಗಳೂರು- 2023-24
•ಡಾ.ಪ್ರಶಾಂತ್ ಎಂ.ವಿ.- ಕನ್ಸಲ್ಟೆಂಟ್ ಪೀಡಿಯಾಟ್ರಿಷಿಯನ್, ನಿಯೊನಟಾಲಜಿಸ್ಟ್ ಅಂಡ್ ಪೀಡಿಯಾಟ್ರಿಕ್ ಅಲರ್ಜಿ ಅಸ್ತಮಾ ಸ್ಪೆಷಲಿಸ್ಟ್, ಚೈಲ್ಡ್ ಸ್ಪೆಷಾಲಿಟಿ ಕ್ಲಿನಿಕ್, ಬೆಂಗಳೂರು. ಮುಖ್ಯ ಸಂಘಟನಾ ಕಾರ್ಯದರ್ಶಿ, ಅಡ್ವಾನ್ಸ್ ನಿಯೊನಟಲ್ ರಿಸಸಿಟೇಷನ್ ಪ್ರೋಗ್ರಾಮ್- 9ನೇ ರೀಜನಲ್ ಟ್ರೈನರ್ಸ್ ಆಫ್ ಟ್ರೈನಿಂಗ್ (ಟಿಒಟಿ) ಬೆಂಗಳುರು, 2017
•ಡಾ. ಶೋಭಾ ಕೆ.- ಪ್ರೊಫೆಸರ್ ಮತ್ತು ಎಚ್.ಒ.ಡಿ., ಡಿಪಾರ್ಟ್ಮೆಂಟ್ ಆಫ್ ಗೈನಕಾಲಜಿಕಲ್ ಆಂಕಾಲಜಿ, ಕಿದ್ವಾಯ್ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ, ಅಧ್ಯಕ್ಷರು ಕೆ.ಎಸ್.ಸಿ.-ಎಜಿಒಐ, ಸ್ಟೇಟ್ ಆರ್ಗನೈಸೇಷನ್ ಬಾಡಿ ಫಾರ್ ಗೈನೇ ಆಂಕಾಲಜಿ
•ಡಾ. ರಜಿನಿ ಉದಯ್- ಪ್ರೊಫೆಸರ್ ಮತ್ತು ಎಚ್.ಒ.ಡಿ. ಅಬ್ ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿ, ಸಪ್ತಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರೀಸರ್ಚ್ ಸೆಂಟರ್
ಈ ಕಾರ್ಯಕ್ರಮ ನಡೆಸಿಕೊಟ್ಟವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಮುಖ್ಯಸ್ಥ,
ಪೀಡಿಯಾಟ್ರಿಕ್ ಇನ್ಫೆಕ್ಷಿಯಸ್ ಡಿಸೀಸಸ್ ಡಿವಿಷನ್ ಮುಖ್ಯಸ್ಥ, ಪಿಐಡಿಎ 2025ರ ಛೇರ್ ಪರ್ಸನ್, ಗೌರವ ಕಾರ್ಯದರ್ಶಿ, ಪಿಐಡಿಎ 2022-23 ಆಗಿರುವ ಡಾ. ಭಾಸ್ಕರ್ ಶೆಣೈ ನಡೆಸಿಕೊಟ್ಟರು. ಒಟ್ಟಿಗೆ ಅವರು ಅರಿವನ್ನು ವಿಸ್ತರಿಸುವ ಅಗತ್ಯ, ಹದಿವಯಸ್ಕರು ಮತ್ತು ಪೋಷಕರನ್ನು ತಲುಪುವ ಪ್ರಾಮುಖ್ಯತೆ ಮತ್ತು ರೋಗತಡೆಯ ಆರೈಕೆಯಲ್ಲಿ ಆರೋಗ್ಯಸೇವಾ ಪೂರೈಕೆದಾರರ ಪಾತ್ರದ ಕುರಿತು ಮಾತನಾಡಿದರು.
ತಜ್ಞರು ಎಚ್.ಪಿ.ವಿ.ಯು ಗರ್ಭಗೊರಳಿನ ಕ್ಯಾನ್ಸರ್ ಗೆ ಮಾತ್ರ ಸೀಮಿತವಾಗಿಲ್ಲ. ಇದು ಯೋನಿ, ಗುದ, ಶಿಶ್ನ ಮತ್ತು ಗಂಟಲನಾಳದ ಕ್ಯಾನ್ಸರ್ ಗಳೊಂದಿಗೆ ಸಂಬಂಧ ಹೊಂದಿದ್ದು ಪುರುಷರು ಹಾಗೂ ಮಹಿಳೆಯರಿಬ್ಬರನ್ನೂ ಬಾಧಿಸುತ್ತಿದೆ ಎಂದರು. ಎಚ್.ಪಿ.ವಿ. ಸೋಂಕಿನ ಹೆಚ್ಚಿನ ಸಾಧ್ಯತೆ 15ರಿಂದ 25 ಇದ್ದು ಪ್ರಾರಂಭಿಕ ಅರಿವು ಮತ್ತು ಸಕಾಲಿಕ ರೋಗತಡೆಯ ಕ್ರಮಗಳು ಅಗತ್ಯ. ಕೈಗೆಟುಕುವ ಲಸಿಕೆ ಈಗ ಲಭ್ಯವಿರುವುದರಿಂದ ಎಚ್.ಪಿ.ವಿ. ಸಂಬಂಧಿತ ಕ್ಯಾನ್ಸರ್ ಗಳಿಂದ ಪ್ರತಿ ವ್ಯಕ್ತಿಯನ್ನೂ ರಕ್ಷಿಸುವುದು ಈಗ ಮತ್ತಷ್ಟು ಸುಲಭವಾಗಿದೆ.
“ಈ ಸಮ್ಮೇಳನಗಳನ್ನು ದೇಶಾದ್ಯಂತ ಆಯೋಜಿಸುವ ಮೂಲಕ ನಾವು ಹ್ಯೂಮನ್ ಪ್ಯಾಪಿಲ್ಲೊಮಾವೈರಸ್ (ಎಚ್.ಪಿ.ವಿ.) ಮತ್ತು ಗರ್ಭಗೊರಳು ಮತ್ತಿತರೆ ಕ್ಯಾನ್ಸರ್ ಗಳೊಂದಿಗೆ ಅದರ ಸಂಪರ್ಕ ಕುರಿತು ತಿಳಿವಳಿಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ” ಎಂದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕ ಪರಾಗ್ ದೇಶ್ ಮುಖ್ ಹೇಳಿದರು. “ವೈದ್ಯಕೀಯ ಪರಿಣಿತರು, ಆರೋಗ್ಯಸೇವಾ ಕಾರ್ಯಕರ್ತರು ಮತ್ತು ಸಮುದಾಯದ ಸದಸ್ಯರನ್ನು ಒಟ್ಟಿಗೆ ತರುವ ಮೂಲಕ ಈ ವೇದಿಕೆಯು ಮುಕ್ತ ಸಂವಾದ ಮತ್ತು ಪ್ರಾರಂಭಿಕ ರೋಗಪತ್ತೆ ಮತ್ತು ತಡೆಯ ಕುರಿತು ಪ್ರಾಯೋಗಿಕ ಹೆಜ್ಜೆಗಳನ್ನು ಉತ್ತೇಜಿಸುತ್ತದೆ” ಎಂದರು.
ಬೆಂಗಳೂರು ಸಮ್ಮೇಳನವು ಪ್ರೇಕ್ಷಕರೊಂದಿಗೆ ಮುಕ್ತ ಸಂವಾದದೊಂದಿಗೆ ಸಮಾರೋಪಗೊಂಡಿದ್ದು ಈ ಅಭಿಯಾನದ ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳುವುದು ಮತ್ತು ಸಮುದಾಯ ಸಕ್ರಿಯತೆ ಮೂಲಕ ತಡೆಯಬಲ್ಲ ಕ್ಯಾನ್ಸರ್ ಗಳ ಹೊರೆ ಕಡಿಮೆ ಮಾಡುವ ಕುರಿತು ವಿಸ್ತಾರ ಗುರಿಗೆ ತನ್ನ ಬದ್ಧತೆಯನ್ನು ಮರು ದೃಢೀಕರಿಸಿತು. ಈ ಉಪಕ್ರಮವು ಮುಂದಿನ ತಿಂಗಳುಗಳಲ್ಲಿ ದೇಶಾದ್ಯಂತ ನಗರಗಳಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಸಬಲೀಕರಣದಲ್ಲಿ ಆರೋಗ್ಯಸೇವೆಯ ವಿಶ್ವಾಸಾರ್ಹ ಧ್ವನಿಗಳ ಮೂಲಕ ವೇದಿಕೆ ಸೃಷ್ಟಿಸುವುದನ್ನು ಮುಂದುವರಿಸಲಿದೆ.
ಪುಣೆಯಲ್ಲಿ ಕೇಂದ್ರ ಕಛೇರಿ ಹೊಂದಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಮಾಣದ ದೃಷ್ಟಿಯಿಂದ ವಿಶ್ವದ ಅತ್ಯಂತ ದೊಡ್ಡ ಲಸಿಕೆ ಉತ್ಪಾದಕನಾಗಿದೆ ಮತ್ತು ಭಾರತ ಹಾಗೂ ಜಾಗತಿಕವಾಗಿ ಸಾರ್ವಜನಿಕ ಆರೋಗ್ಯದ ಸುಧಾರಣೆಯಲ್ಲಿ ದೀರ್ಘಾವಧಿ ಪಾತ್ರ ವಹಿಸುತ್ತಿದೆ.
ವಿಶೇಷ ಮಾಹಿತಿ:
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿ.ಯು ಪ್ರಮಾಣದ ದೃಷ್ಟಿಯಿಂದ ವಿಶ್ವದ ಅತ್ಯಂತ ದೊಡ್ಡ ಲಸಿಕೆ ಉತ್ಪಾದಕನಾಗಿದ್ದು ಕಳೆದ 5 ದಶಕಗಳಿಂದ ಕೈಗೆಟುಕುವ ಮತ್ತು ಉನ್ನತ ಗುಣಮಟ್ಟದ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕವಾಗಿ ಜೀವಗಳನ್ನು ಉಳಿಸುವ ಧ್ಯೇಯದೊಂದಿಗೆ ಸೆರಂ ಇನ್ಸ್ಟಿಟ್ಯೂಟ್ ಸಾರ್ವಜನಿಕ ಆರೋಗ್ಯಕ್ಕೆ ಭಾರತದ 1ನೇ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಿಂಗತಟಸ್ಥ ಪುರುಷರು ಹಾಗೂ ಮಹಿಳೆಯರಿಗೆ ನೀಡಬಲ್ಲ ಕ್ವಾಡ್ರಿವೇಲೆಂಟ್ ಎಚ್.ಪಿ.ವಿ. ಲಸಿಕೆ ಸರ್ವವಾಕ್ ಮೂಲಕ ಸಾರ್ವಜನಿಕ ಆರೋಗ್ಯದಲ್ಲಿ ಮಹತ್ತರ ಕೊಡುಗೆ ನೀಡಿದೆ.
•ಗರ್ಭಗೊರಳಿನ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಗೆ ಎರಡನೇ ಪ್ರಮುಖ ಕಾರಣವಾಗಿದೆ
•ಗರ್ಭಗೊರಳಿನ ಕ್ಯಾನ್ಸರ್ ರಿಸ್ಕ್ ಹೊಂದಿದ ಮಹಿಳೆಯರು (ವಯಸ್ಸು>=15 ವರ್ಷಗಳು) 511.4 ಮಿಲಿಯನ್ (51.4 ಕೋಟಿ)
•ವಾರ್ಷಿಕ ಗರ್ಬಗೊರಳಿನ ಕ್ಯಾನ್ಸರ್ ಹೊಸ ಪ್ರಕರಣಗಳು: 1,23,907
•ವಾರ್ಷಿಕ ಗರ್ಭಗೊರಳಿನ ಕ್ಯಾನ್ಸರ್ ಮರಣಗಳು: 77,348
ಆಧಾರ: ಐಸಿಒ/ಐ.ಎ.ಆರ್.ಸಿ. ಇನ್ಫರ್ಮೇಷನ್ ಸೆಂಟರ್ ಆನ್ ಎಚ್.ಪಿ.ವಿ. ಅಂಡ್ ಕ್ಯಾನ್ಸರ್ 2023
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕುರಿತು
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿ.ಯು ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ, ಕೈಗೆಟುಕುವ ಲಸಿಕೆಗಳನ್ನು ವಿಶ್ವವ್ಯಾಪಿ ಪೂರೈಸಲು ಬದ್ಧವಾದ ಸೈರಸ್ ಪೂನಾವಾಲಾ ಸಮೂಹದ ಭಾಗವಾಗಿದೆ. ಯು.ಎಸ್., ಯು.ಕೆ. ಮತ್ತು ಯೂರೋಪ್ ಒಳಗೊಂಡು 170+ ದೇಶಗಳಲ್ಲಿರುವ ಎಸ್.ಐ.ಐ. ವಿಶ್ವದ ಅತ್ಯಂತ ದೊಡ್ಡ ಲಸಿಕೆ ಉತ್ಪಾದಕನಾಗಿರುವ ಹೆಗ್ಗಳಿಕೆ ಹೊಂದಿದೆ. ಎಸ್.ಐ.ಐ.ಪಿ.ಎಲ್. ಬಹು ಕಾರ್ಯಗಳ ಉತ್ಪಾದನೆ ಮತ್ತು ಪುಣೆಯ ಹಡಪ್ಸರ್ ಮತ್ತು ಮಂಜರಿಯಲ್ಲಿರುವ ಅತ್ಯಂತ ದೊಡ್ಡ ಸೌಲಭ್ಯಗಳಲ್ಲಿ ಒಂದಾಗಿದ್ದು ವಾರ್ಷಿಕ 4 ಬಿಲಿಯನ್ ಡೋಸ್ ಗಳನ್ನು ಉತ್ಪಾದಿಸುವ ಮೂಲಕ ಹಲವು ವರ್ಷಗಳಿಂದ 30 ಮಿಲಿಯನ್ ಜೀವಗಳನ್ನು ಉಳಿಸಿದೆ.
1966ರಲ್ಲಿ ಸ್ಥಾಪನೆಯಾದ ಎಸ್.ಐ.ಐ.ಪಿ.ಎಲ್.ನ ಪ್ರಾಥಮಿಕ ಉದ್ದೇಶ ಜೀವ ಉಳಿಸುವ ಇಮ್ಯುನೊಬಯಾಲಾಜಿಕಲ್ ಔಷಧಗಳನ್ನು ಉತ್ಪಾದಿಸುವುದಾಗಿದ್ದು ಅದು ಕೈಗೆಟುಕಬಲ್ಲತೆ ಮತ್ತು ಲಭ್ಯತೆಗೆ ವಿಶೇಷ ಒತ್ತು ನೀಡುತ್ತದೆ. ಜಾಗತಿಕ ಆರೋಗ್ಯದ ಸುಧಾರಣೆಗೆ ತನ್ನ ಸದೃಢ ಬದ್ಧತೆ ಹೊಂದಿರುವ ಕಂಪನಿಯು ಡಿಫ್ತೀರಿಯಾ, ಟೆಟನಸ್, ಪರ್ಟುಸಿಸ್, ಎಚ್.ಐ.ಬಿ., ಬಿಸಿಜಿ, ಆರ್-ಹೆಪಟೈಟಿಸ್ ಬಿ, ದಡಾರ, ಮಂಪ್ಸ್ ಮತ್ತು ರುಬೆಲ್ಲಾದಂತಹ ರೋಗಗಳಿಗೆ ಅಗತ್ಯ ಲಸಿಕೆಗಳ ಬೆಲೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶ್ವದ ಅತ್ಯಂತ ಕೈಗೆಟುಕುವ ಪಿಸಿವಿ `ನ್ಯುಮೊಸೀಲ್, ಭಾರತದಲ್ಲಿ ಮೊದಲ ಕ್ಯೂಎಚ್.ಪಿ.ವಿ. ದೇಶೀ ಲಸಿಕೆ `ಸರ್ವವಾಕ್ ಮತ್ತು ಮಲೇರಿಯಾ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳಲ್ಲಿ ಬಳಸಲು ಮಾನ್ಯತೆ ಪಡೆದ ಎರಡನೆಯ ಮಲೇರಿಯಾ ಲಸಿಕೆ ಆರ್21/ಮ್ಯಾಟ್ರಿಕ್ಸ್-ಎಂ, ಮಕ್ಕಳಲ್ಲಿ ಬಳಕೆಗೆ ಅನುಮೋದಿತ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಅರ್ಹತೆ ಪಡೆದ ವಿಶ್ವದ ಮೊದಲ ಪೆಂಟವೆಲೆಂಟ್ (ಎಸಿವೈಡಬ್ಲ್ಯೂಎಕ್ಸ್) ಮೆನಿಗೊಕೊಕಲ್ ಪಾಲಿಸ್ಯಾಚರೈಡ್ ಕಂಜುಗೆಟ್ ವ್ಯಾಕ್ಸಿನ್ ಉತ್ಪಾದಿಸುತ್ತಿದೆ. ಅಲ್ಲದೆ ಎಸ್.ಐ.ಐ.ಪಿ.ಎಲ್.ಕೋವಿಡ್-19ರ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ವಿಶ್ವದಾದ್ಯಂತ 2 ಬಿಲಿಯನ್ ಡೋಸ್ ಗಳನ್ನು ಮೀರಿ ಕೋವಿಡ್-19 ಲಸಿಕೆಗಳನ್ನು ಪೂರೈಸಿದೆ.
ತನ್ನ ಜಾಗತಿಕ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಲಸಿಕೆಯ ವ್ಯಾಪಕ ಲಭ್ಯತೆಗೆ ಎಸ್.ಐ.ಐ. ಸೆರಂ ಲೈಫ್ ಸೈನ್ಸಸ್ ಲಿ.ಯನ್ನು ಯು.ಕೆ.ಯಲ್ಲಿ ಅಧೀನ ಸಂಸ್ಥೆಯಾಗಿ ಮತ್ತು ಯು.ಎಸ್.ನಲ್ಲಿ ಸೆರಂ ಇಂಕ್. ಅನ್ನು ಸ್ಥಾಪಿಸಿದೆ. ಆವಿಷ್ಕಾರಕ್ಕೆ ಸತತ ಆದ್ಯತೆ ನೀಡುತ್ತಿದ್ದು ಎಸ್.ಐ.ಐ. ಕೈಗೆಟುಕುವ ಲಸಿಕೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು ವಿಶ್ವದಾದ್ಯಂತ ಕೋಟ್ಯಂತರ ಜೀವನಗಳಿಗೆ ಪರಿಣಾಮ ಬೀರುತ್ತಿದೆ.