Indus Water treaty: ಸಿಂಧೂ ನದಿ ನೀರು ಬಿಡಿ ಎಂದ ಪಾಕಿಸ್ತಾನಕ್ಕೆ ಭಾರತ ಕೊಟ್ಟ ಉತ್ತರವೇನು ಗೊತ್ತಾ
ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಕದನವಿರಾಮ ಏರ್ಪಟ್ಟಿದೆ. ಹಾಗಿದ್ದರೂ ಸಿಂಧೂ ನದಿ ನೀರು ಹಂಚಿಕೆ ಮಾಡಲು ಭಾರತ ಒಪ್ಪಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರವೇರ್ಪಟ್ಟಿದೆ.
ಪಾಕಿಸ್ತಾನದ ನೀರಿನ ಶೇ.80 ರಷ್ಟು ಅಗತ್ಯಗಳನ್ನು ಸಿಂಧೂ ನದಿ ಪೂರೈಸುತ್ತಿತ್ತು. ಕೃಷಿ, ಕೃಷಿಯೇತರ ಚಟುವಟಿಕೆಗಳಿಗೆ ಪಾಕಿಸ್ತಾನ ಸಿಂಧೂ ನದಿ ನೀರನ್ನು ಅವಲಂಬಿಸಿತ್ತು. ಆದರೆ ಈಗ ಭಾರತ ನೀರು ಬಿಡದೇ ಇರಲು ತೀರ್ಮಾನಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿದೆ.
ನೀರು ಬಿಡಿ ಎನ್ನುತ್ತಿರುವ ಪಾಕಿಸ್ತಾನಕ್ಕೆ ಎಲ್ಲಿಯವರೆಗೆ ಭಯೋತ್ಪಾದಕರನ್ನು ಛೂ ಬಿಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಉತ್ತರ ಕೊಟ್ಟಿದೆ.