ಭಾರತದ ಜತೆ ಯುದ್ಧ ಮಾಡಲ್ಲ ಎಂದ ಪಾಕಿಸ್ತಾನ

ಮಂಗಳವಾರ, 5 ಜೂನ್ 2018 (09:12 IST)
ನವದೆಹಲಿ: ಭಾರತ ಮತ್ತು ಪಾಕ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ ಬೆನ್ನಲ್ಲೇ ಭಾರತದ ಜತೆಗೆ ಯುದ್ಧ ಮಾಡಲ್ಲ ಎಂದು ಪಾಕ್ ಸೇನಾ ನಾಯಕರು ಹೇಳಿಕೊಂಡಿದ್ದಾರೆ.

ರಂಜಾನ್ ತಿಂಗಳಲ್ಲಿ ಕದನ ವಿರಾಮ ಘೋಷಿಸಿದ್ದರೂ ಪಾಕ್ ಕಿರಿಕ್ ಮಾಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಪಾಕ್ ಈ ಹೇಳಿಕೆ ನೀಡಿದೆ.

ಅಷ್ಟೇ ಅಲ್ಲ, ಭಾರತ ತನ್ನ ನಾಗರಿಕರ ಮೇಲೆ ದಾಳಿ ನಡೆಸಿತ್ತು. ಅದಕ್ಕೇ ನಮ್ಮ ನಾಗರಿಕರನ್ನು ರಕ್ಷಿಸಲು ಪ್ರತಿ ದಾಳಿ ನಡೆಸಿದ್ದೆವು. ನಾವು ಶಾಂತಿ ಬಯಸುತ್ತೇವೆ. ಆದರೆ ಅದನ್ನು ತಪ್ಪಾಗಿ ಭಾವಿಸಬಾರದು ಎಂದು ಪಾಕ್ ಸೇನಾ ವಕ್ತಾರ ಆಸಿಫ್ ಗಫೂರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ