ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಪತ್ನಿ ಜೊತೆ ಗಾಜಿನ ಪರದೆ ಹಿಂದೆ ಶುಭಾಂಶು ಶುಕ್ಲ ಮೌನ ಸಂಭಾಷಣೆ

Krishnaveni K

ಬುಧವಾರ, 25 ಜೂನ್ 2025 (14:14 IST)
Photo Credit: X
ಫ್ಲೋರಿಡಾ: 41 ವರ್ಷಗಳ ಬಳಿಕ ಭಾರತದ ಗಗನಯಾತ್ರಿಯೊಬ್ಬರು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಇಂದು ಫ್ಲೋರಿಡಾ ನಾಸಾ ಕೇಂದ್ರದಿಂದ ಉಡಾವಣೆಗೊಂಡ ಆಕ್ಸಿಯಂ ಮಿಷನ್ 4 ನಲ್ಲಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಸೇರಿದಂತೆ ನಾಲ್ವರು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದ್ದಾರೆ.

ಈ ಮೂಲಕ ಶುಭಾಂಶು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುವುದು ಎಂದರೆ ಸಾಮಾನ್ಯವಲ್ಲ. ಅವರನ್ನು ಇದಕ್ಕಾಗಿ ಹಲವು ತಿಂಗಳುಗಳ ಕಾಲ ಪರೀಕ್ಷಿಸಿ, ಪ್ರಯೋಗಕ್ಕೊಳಪಡಿಸಲಾಗುತ್ತದೆ. ಬಾಹ್ಯಾಕಾಶದ ವಾತಾವರಣದಲ್ಲಿರಿಸಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವರೇ ಎಂದು ಪರೀಕ್ಷಿಸಲಾಗುತ್ತದೆ. ಎಲ್ಲಾ ಪರೀಕ್ಷೆ ಪಾಸ್ ಆದರೆ ಮಾತ್ರ ಬಾಹ್ಯಾಕಾಶ ಯಾತ್ರೆಗೆ ಅರ್ಹರಾಗುತ್ತಾರೆ.

ಇನ್ನು, ಒಮ್ಮೆ ಆಯ್ಕೆಯಾದ ಬಳಿಕ ಅವರು ಕುಟುಂಬದ ಜೊತೆ ಸಾಮಾನ್ಯ ವಾತಾವರಣದಲ್ಲಿ ಕಾಲ ಕಳೆಯಲು ಆಗುವುದಿಲ್ಲ. ಆದರೆ ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಶುಭಾಂಶು ತಮ್ಮ ಪತ್ನಿಯನ್ನು ಭೇಟಿ ಮಾಡಿ ವಿದಾಯ ಹೇಳಿದ್ದಾರೆ.

ಆದರೆ ಇವರಿಬ್ಬರ ಮುಖಾಮುಖಿಗೆ ಗಾಜಿನ ಪರದೆ ಅಡ್ಡವಾಗಿದೆ. ಗಾಜಿನ ಪರದೆಯ ನಡುವೆಯೇ ದಂಪತಿ ನಿಂತು ಒಬ್ಬರನ್ನೊಬ್ಬರು ನೋಡಿಕೊಂಡು ಮೌನವಾಗಿ ಬೀಳ್ಕೊಟ್ಟಿದ್ದಾರೆ. ಶುಭಾಂಶು ಪತ್ನಿ ಕಾಮ್ನಾ ಅಲ್ಲಿಂದಲೇ ಪತಿಗೆ ವಿದಾಯ ಹೇಳುವಾಗ ಇಬ್ಬರೂ ಭಾವುಕರಾಗಿದ್ದಾರೆ. ಇನ್ನು, ಶುಭಾಂಶು ಕೂಡಾ ಪತ್ನಿಗೆ ಇನ್ ಸ್ಟಾಗ್ರಾಂ ಮೂಲಕ ಧನ್ಯವಾದ ಸಲ್ಲಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ