ಐಪಿಎಲ್ ದೆಸೆಯಿಂದ ಸೆಹ್ವಾಗ್ ಗೆ ಸ್ನೇಹಿತ ಗಂಭೀರ್ ಶತ್ರುವಾದರು!

ಶುಕ್ರವಾರ, 7 ಏಪ್ರಿಲ್ 2017 (09:56 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಆಡುವಾಗ ಗೌತಮ್ ಗಂಭೀರ್- ವೀರೇಂದ್ರ ಸೆಹ್ವಾಗ್ ಭಾರೀ ಸ್ನೇಹಿತರು. ಆದರೆ ಐಪಿಎಲ್ ದೆಸೆಯಿಂದ ಸ್ನೇಹಿತ ಗಂಭೀರ್ ಮೇಲೆ ಸೆಹ್ವಾಗ್ ಗರಂ ಆಗಿದ್ದಾರೆ.

 

ಇದಕ್ಕೆ ಕಾರಣ ಪಂಜಾಬ್ ತಂಡ ಮಾರಾಟವಾಗದೇ ಉಳಿದ ಇಶಾಂತ್ ಶರ್ಮಾರನ್ನು ಕೊನೆಯ ಕ್ಷಣದಲ್ಲಿ ತಂಡಕ್ಕೆ ಸೇರಿಸಿಕೊಂಡಿದ್ದು. ಸೆಹ್ವಾಗ್ ಪಂಜಾಬ್ ತಂಡದ ಕೋಚ್. ಕೋಲ್ಕೊತ್ತಾ ತಂಡದ ನಾಯಕ ಗಂಭೀರ್ ಇಶಾಂತ್ ಸೇರ್ಪಡೆ ಬಗ್ಗೆ ವ್ಯಂಗ್ಯವಾಡಿದ್ದರು.

 
ಕೇವಲ 4 ಓವರ್ ಎಸೆಯುವುದಕ್ಕೆ 2 ಕೋಟಿ ಯಾರು ಕೊಡುತ್ತಾರೆ ಎಂದು ಇಶಾಂತ್ ಮೂಲಧನದ ಬಗ್ಗೆ ವ್ಯಂಗ್ಯವಾಡಿದ್ದರು. ಇದನ್ನು ಪತ್ರಕರ್ತರು ವೀರೂ ಗೆ ಕೇಳಿದಾಗ ಅವರು ತಕ್ಕ ಪ್ರತ್ಯುತ್ತರವನ್ನೇ ಕೊಟ್ಟಿದ್ದಾರೆ. ಗಂಭೀರ್ 12 ಕೋಟಿ ರೂ. ಹಿಂದೆ ಕೋಲ್ಕೊತ್ತಾಗೆ ಮಾರಾಟವಾಗಿದ್ದರು. ಇದನ್ನು ಪರೋಕ್ಷವಾಗಿ ಉಲ್ಲೇಖಿಸಿದ ಸೆಹ್ವಾಗ್ 60 ಬಾಲ್ ಎದುರಿಸಲು 12 ಕೋಟಿ ಕೊಡುತ್ತಾರೆಂದರೆ, ನಾಲ್ಕು ಓವರ್ ಎಸೆಯಲು 2 ಕೋಟಿ ನೀಡಬಾರದೇಕೆ? ಎಂದು ಖಾರವಾಗಿ ಪ್ರಶ್ನಿಸಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ