ಪುಣೆ: ಧೋನಿ ಮತ್ತು ಪುಣೆ ಐಪಿಎಲ್ ತಂಡದ ಮಾಲಿಕರ ನಡುವಿನ ಮುಸುಕಿನ ಗುದ್ದಾಟದಲ್ಲಿ ಪೆಟ್ಟು ತಿಂದವರು ನಾಯಕ ಸ್ಟೀವ್ ಸ್ಮಿತ್! ಧೋನಿ ಪ್ರತೀಕಾರಕ್ಕೆ ಪಂದ್ಯ ಮರೆತು ಸ್ಮಿತ್ ಟಾಯ್ಲೆಟ್ ನಲ್ಲಿ ಕೂರುವಂತಾಯಿತಂತೆ!
ಹೀಗಂತ ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡುತ್ತಿದ್ದಾರೆ. ಅಸಲಿಗೆ ಸ್ಮಿತ್ ನಿನ್ನೆಯ ಪಂದ್ಯದಲ್ಲಿ ಆಡಿರಲಿಲ್ಲ. ಅದಕ್ಕೆ ಕಾರಣ ಅವರ ಹೊಟ್ಟೆ ಕೆಟ್ಟಿತ್ತು. ಹೀಗಾಗಿ ರೆಹಾನೆಯನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು.
ಧೋನಿ ಇರುವಾಗ ಧೋನಿ ಬದಲಿಗೆ ರೆಹಾನೆಯನ್ನು ನಾಯಕನಾಗಿ ಮಾಡಿದ್ದಕ್ಕೆ ಅಭಿಮಾನಿಗಳ ಆಕ್ರೋಶ ತಾರಕಕ್ಕೇರಿತ್ತು. ಪುಣೆ ಮಾಲಿಕರನ್ನು ಅಭಿಮಾನಿಗಳು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಧೋನಿ ಮತ್ತು ಪುಣೆ ಮಾಲಿಕರ ನಡುವೆ ನಡೆಯುತ್ತಿರುವ ಗುದ್ದಾಟ ಈಗ ಗುಟ್ಟಾಗಿ ಉಳಿದಿಲ್ಲ. ಸಾಕ್ಷಿ ಧೋನಿ ನಿನ್ನೆ ಚೆನ್ನೈ ಸಮವಸ್ತ್ರ ಧರಿಸಿ ಫೋಟೋ ಪ್ರಕಟಿಸಿ ಸುದ್ದಿ ಮಾಡಿದ್ದರು. ಇದೀಗ ಅಭಿಮಾನಿಗಳು, ಧೋನಿ ತಮ್ಮ ಮೆಚ್ಚಿನ ಬಟರ್ ಚಿಕನ್ ತಿನಿಸಿ ಸ್ಮಿತ್ ಹೊಟ್ಟೆ ಹಾಳು ಮಾಡಿದರು ಎಂದು ತಮಾಷೆ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ