ಐಯಾಮ್ ಸಾರಿ ಎಂದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್

ಬುಧವಾರ, 29 ಮಾರ್ಚ್ 2017 (08:39 IST)
ಧರ್ಮಶಾಲಾ: ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಇದು ಮೇರೆ ಮೀರಿತ್ತು. ಆದರೆ ಸರಣಿ ಮುಗಿದ ಮೇಲೆ ಆಸೀಸ್ ನಾಯಕ ಸ್ಟೀವ್ ಸ್ಮಿತ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.

 

ಡಿಆರ್ ಎಸ್ ಚೀಟಿಂಗ್ ವಿವಾದದ ನಂತರ ಉಭಯ ಆಟಗಾರರ ನಡುವಿನ ಸಂಬಂಧ ಹಳಸಿತ್ತು. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮುರಳಿ ವಿಜಯ್ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದರು. ಬಹುಶಃ ಈ ಹಿನ್ನಲೆಯಲ್ಲಿ ಸ್ಮಿತ್ ಕ್ಷಮೆ ಯಾಚಿಸಿದ್ದಾರೆ.

 
‘ಇದೊಂದು ಪೈಪೋಟಿಯಿಂದ ಕೂಡಿದ ಸರಣಿಯಾಗಿತ್ತು. ಕೆಲವೊಂದು ಸಮಯದಲ್ಲಿ ನನ್ನ ಭಾವನೆ ನನ್ನ ನಿಯಂತ್ರಣದಲ್ಲಿರಲಿಲ್ಲ. ಆಗ ನಾನು ಮಿತಿ ಮೀರಿ ವರ್ತಿಸಿದ್ದೇನೆ. ಅದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ’ ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ